Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ಗೊಂದಲ: ಒಂದೇ ದಿನಕ್ಕೆ ₹8 ಏರಿಕೆ!

Spread the love

ಸುಳ್ಯ: ಒಂದೇ ದಿನದ ಅಂತರದಲ್ಲಿ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಟಿಕೆಟ್‌ ದರದಲ್ಲಿ ವ್ಯತ್ಯಾಸ ಕಂಡು ಬಂದು, ಗೊಂದಲ ಸೃಷ್ಟಿಯಾದ ಘಟನೆ ಪಟ್ಟಣದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಜು.9 ರಂದು ಕಲ್ಲುಗುಂಡಿ/ಸಂಪಾಜೆಯಿಂದ ಪುತ್ತೂರಿಗೆ ಪ್ರಯಾಣಿಸಿದ್ದು ಟಿಕೆಟ್‌ ದರ 76 ರೂ.

ಪಾವತಿಸಿದ್ದರು. ಅದೇ ಬಸ್ಸಲ್ಲಿ ಅದೇ ಸಮಯಕ್ಕೆ ಮರುದಿನ (ಜು.10)ಕಲ್ಲುಗುಂಡಿ/ಸಂಪಾಜೆಯಿಂದ ಪುತ್ತೂರಿಗೆ ಪ್ರಯಾಣಿಸುವಾಗ 84 ರೂ. ಟಿಕೆಟ್‌ ಪಡೆಯಬೇಕಾಯಿತು.

ಒಂದು ದಿನದ ಅಂತರದಲ್ಲಿ ಟಿಕೆಟ್‌ದರದಲ್ಲಿ ವ್ಯತ್ಯಾಸ ಕಂಡುಬಂದಿರುವ ಬಗ್ಗೆ ಪ್ರಯಾಣಿಕ ಗೊಂದಲ ವ್ಯಕ್ತಪಡಿಸಿದ್ದು, ಯಾವ ಕಾರಣಕ್ಕಾಗಿ ಎಂಬುದು ಅವರ ಪ್ರಶ್ನೆ. ಈ ಬಗ್ಗೆ ದೂರು ವಿಭಾಗಕ್ಕೆ ರವಾನಿಸಲಾಗಿದ್ದು, ಪರಿಶೀಲಿಸುವ ಉತ್ತರ ಸಿಕ್ಕಿದೆ. ಘಟನೆ ಬಗ್ಗೆ ಸುಳ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷರು ಅಧಿಕಾರಿಗಳ ಗಮನಕ್ಕೆ ತಂದಿದ್ದು, ನಿರ್ವಾಹಕರು ಹೊಸಬರಾಗಿದ್ದು, ತಪ್ಪಾಗಿದೆ. ಹೆಚ್ಚುವರಿ ಹಣ ವಾಪಸು ಸಿಗುವ ಭರವಸೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *