Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾಲಗಾರರ ಕಿರುಕುಳಕ್ಕೆ ಯುವ ಉದ್ಯಮಿ ಬಲಿ, ಡೆತ್ ನೋಟ್‌ನಲ್ಲಿ ಗಂಭೀರ ಆರೋಪ!

Spread the love

ಸಾಲಗಾರರ ಕಿರುಕುಳ ಸಹಿಸಲಾರದೇ ಯುವ ಉದ್ಯಮಿಯೊಬ್ಬರು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಪುದುಚೇರಿಯಲ್ಲಿ ನಡೆದಿದೆ.

ಮೃತರನ್ನು ವಿಕ್ರಮ್ (33) ಎಂದು ಗುರುತಿಸಲಾಗಿದೆ. ಖಾಸಗಿ ಸಾಲದಾತರು ಅತಿಯಾಗಿ ಬಡ್ಡಿ ವಿಧಿಸಿದ್ದರಿಂದ ನಿರಂತರ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಸಾವಿಗೆ ಶರಣಾಗಿದ್ದಾರೆ.

ವಿಕ್ರಮ್ ಅವರು ತಮ್ಮ ಕುಟುಂಬವನ್ನು ಪೋಷಿಸಲು ಕೋಳಿ ಅಂಗಡಿ ನಡೆಸುತ್ತಿದ್ದರು. ಅಪಘಾತದ ಬಳಿಕ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಚಿಂತಾಕ್ರಾಂತರಾಗಿದ್ದರು. ಇದರ ನಡುವೆ ಸಾಲಗಾರರ ಕಿರುಕುಳ ಹೆಚ್ಚಾದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮೃತ ವಿಕ್ರಮ್ ಡೆತ್ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಹಲವಾರು ಸಾಲದಾತರ ಹೆಸರುಗಳನ್ನು ಬರೆದಿಟ್ಟಿದ್ದಾನೆ. ನನ್ನ ಸಾವಿಗೆ ಇವರೇ ಕಾರಣ ಎಂದಿದ್ದಾನೆ. ಪತ್ರದಲ್ಲಿ ಕಿರುಕುಳ ಮತ್ತು ಶೋಷಣೆಯ ಬಗ್ಗೆ ಆಘಾತಕಾರಿ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಸಾಲದಾತನೊಬ್ಬ ತನ್ನ ಸಾಲವನ್ನು ತೀರಿಸುವವರೆಗೆ ಹೆಂಡತಿ ಮತ್ತು ಮಗಳನ್ನು ಮನೆಗೆ ಕಳುಹಿಸುವಂತೆ ಬೇಡಿಕೆ ಇಟ್ಟ ಎಂಬ ಆಘಾತಕಾರಿ ಸಂಗತಿಯನ್ನು ವಿಕ್ರಮ್ ಡೆತ್ನೋಟ್ನಲ್ಲಿ ಬರೆದಿದ್ದಾರೆ.

ವಿಕ್ರಮ್ 3.8 ಲಕ್ಷ ರೂಪಾಯಿ ಸಾಲಕ್ಕೆ ತಿಂಗಳಿಗೆ 38,000 ರೂಪಾಯಿ ಬಡ್ಡಿ ಪಾವತಿಸಿದ್ದಾಗಿ ಬರೆದಿದ್ದಾರೆ. ಇದು ಶೇ. 10 ರಷ್ಟು ಮಾಸಿಕ ಬಡ್ಡಿ ದರವಾಗಿದೆ. ಮತ್ತೊಬ್ಬ ಸಾಲದಾತ 30,000 ರೂಪಾಯಿ ಸಾಲಕ್ಕೆ ಪ್ರತಿ ತಿಂಗಳು 6,000 ರೂಪಾಯಿ ಬಡ್ಡಿ ನೀಡುವಂತೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಿದ್ದಾರೆ. ಅಪಘಾತದ ನಂತರ ವಿಕ್ರಮ್ ಹಾಸಿಗೆ ಹಿಡಿದ ಬಳಿಕ ಸಾಲಗಾರರ ಕಿರುಕುಳ ಹೆಚ್ಚಾಯಿತು. ಇದು ವಿಕ್ರಮ್ ಅವರನ್ನು ಮತ್ತು ಅವರ ಕುಟುಂಬವನ್ನು ಸಾಲ, ಭಯ ಮತ್ತು ಹತಾಶೆಯ ಸುಳಿಗೆ ಸಿಲುಕಿಸಿತು. ಅಂತಿಮವಾಗಿ ವಿಕ್ರಮ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಂದಹಾಗೆ, ವಿಕ್ರಮ್ ಇತ್ತೀಚೆಗೆ ನಟ ವಿಜಯ್ ಪ್ರಾರಂಭಿಸಿದ ರಾಜಕೀಯ ಸಂಘಟನೆಯಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನ ಸ್ಥಳೀಯ ಕಾರ್ಯಕರ್ತರಾಗಿದ್ದರು. ತಮ್ಮ ಪತ್ನಿ ಮತ್ತು ಮಗಳನ್ನು ನೋಡಿಕೊಳ್ಳುವಂತೆ ನಟ ವಿಜಯ್ಗೆ ಮನವಿ ಮಾಡಿದ್ದಾರೆ. ಇದು ಅವರ ಅಸಹಾಯಕತೆಯ ಆಳವನ್ನು ಒತ್ತಿಹೇಳುತ್ತದೆ. ವಿಕ್ರಮ್ ಮಾಡಿರುವ ಆರೋಪಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಡೆತ್ನೋಟ್ನಲ್ಲಿ ಉಲ್ಲೇಖಿಸಲಾದ ಲೇವಾದೇವಿಗಾರರ ಗುರುತು ಮತ್ತು ಚಟುವಟಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯಕ್ಕೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ.

ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆಯ ಭರವಸೆ ನೀಡಿದ್ದಾರೆ ಮತ್ತು ವಿಕ್ರಮ್ ಸಾವು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮವಾಗಿ ಹಣ ಸಾಲ ನೀಡುವಿಕೆಯನ್ನು ತಡೆಯಲು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅನೇಕ ನೆಟ್ಟಿಗರು ಒತ್ತಾಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *