Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು ಬೆಂಗಳೂರಿನ ಕರಾವಳಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ

Spread the love

ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ವಿವಾದಾತ್ಮಕ ಪ್ರಸ್ತಾವನೆಯನ್ನು ಕರ್ನಾಟಕ ಸಚಿವ ಸಂಪುಟ ಇತ್ತೀಚೆಗೆ ಅನುಮೋದಿಸಿದೆ. ಇದರ ಜೊತೆಗೆ, ಗೃಹ ಸಚಿವ ಜಿ. ಪರಮೇಶ್ವರ ಅವರು ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡುವ ಸಾಧ್ಯತೆಯ ಬಗ್ಗೆ ಸೂಚನೆ ನೀಡಿದ್ದು, ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳನ್ನು ನಗರದ ಹೆಸರಿನಲ್ಲಿ ಮರುನಾಮಕರಣ ಮಾಡುವುದರ ಮೂಲಕ ವ್ಯಾಪಕ ಯೋಜನೆ ರೂಪಿಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.

ಈ ಬೆಳವಣಿಗೆ ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ನಾಗರಿಕರು ರಾಜ್ಯ ಸರ್ಕಾರವನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಂದ ತುಂಬಿದ ರಾಜಕೀಯ ಪ್ರೇರಿತ ಮರುಬ್ರ್ಯಾಂಡಿಂಗ್ ನಡೆಸುತ್ತಿರುವುದಾಗಿ ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ಈ ನಿರ್ಧಾರ ವ್ಯಂಗ್ಯ, ಕಿಡಿ, ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ. ಹಲವರು ಈ ಹೆಸರಿನ ಬದಲಾವಣೆಯ ತರ್ಕವನ್ನು ಪ್ರಶ್ನಿಸುತ್ತಿದ್ದು, ಭೌಗೋಳಿಕ ನಿಖರತೆಯ ಕೊರತೆ ಮತ್ತು ಈಗಿರುವ ಪ್ರಾದೇಶಿಕ ಗುರುತುಗಳ ಅಳಿಸುವಿಕೆಯನ್ನು ಎತ್ತಿ ತೋರಿಸಿದ್ದಾರೆ.

X ಬಳಕೆದಾರರಿಂದ ವ್ಯಾಪಕ ವ್ಯಂಗ್ಯ ಪ್ರತಿಕ್ರಿಯೆಗಳು ಇಂತಿದೆ

“ತುಮಕೂರಿನಲ್ಲಿ ಏಕೆ ನಿಲ್ಲಬೇಕು? ನಮ್ಮ ರಾಜಕಾರಣಿಗಳ ರಿಯಲ್ ಎಸ್ಟೇಟ್ ದುರಾಸೆ ತೃಪ್ತಿಯಾಗುವವರೆಗೆ ಕರ್ನಾಟಕವನ್ನೆಲ್ಲಾ ಬೆಂಗಳೂರು ರಾಜ್ಯ ಎಂದು ಮರುನಾಮಕರಣ ಮಾಡಿ.” ಎಂದು ಒಬ್ಬರು ಬರೆದಿದ್ದಾರೆ

ಮತ್ತೊಬ್ಬರು ಹೀಗೆ ಹೇಳಿದರು:

“ಮಂಗಳೂರು, ಬೆಂಗಳೂರು ಕರಾವಳಿ ಆಗಬೇಕು,” ಎಂದು ಅವರು ಮರುನಾಮಕರಣದ ಬಗ್ಗೆ ಟೀಕೆ ವ್ಯಕ್ತಪಡಿಸಿದರು.

ಇನ್ನೊಬ್ಬರು ವ್ಯಂಗ್ಯವಾಗಿ “ಮೈಸೂರು ಹಳೆಯ ಬೆಂಗಳೂರು ಆಗಬಹುದು.” ಎಂದು ಬರೆದಿದ್ದಾರೆ.
ವಿಡಂಬನೆಯನ್ನು ಮುಂದುವರಿಸುತ್ತಾ ಮತ್ತೊಬ್ಬರು, ಬೀದರ್ ಅನ್ನು ಬೆಂಗಳೂರು ಎಕ್ಸ್ಟ್ರೀಮ್ ನಾರ್ತ್ ಎಂದು ಮರುನಾಮಕರಣ ಮಾಡುವವರೆಗೂ ಇದು ನಿಲ್ಲುವುದಿಲ್ಲ! ಎಂದಿದ್ದಾರೆ.

ಹಲವಾರು ಬಳಕೆದಾರರು ಹೊಸ ಹೆಸರುಗಳ ಹಾಗೂ ಸ್ಥಳೀಯರ ನಿಜವಾದ ಭಾವನೆಗಳ ನಡುವಿನ ಅಂತರವನ್ನು ಒತ್ತಿ ಹೇಳುತ್ತಿದ್ದಾರೆ.

ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯೆ ನೀಡಿ,

“ತುಮಕೂರು ಮತ್ತು ರಾಮನಗರ ತುಂಬಾ ಚೆನ್ನಾದ ಹೆಸರುಗಳು. ಇಲ್ಲಿನ ಜನರು ಬೆಂಗಳೂರಿನೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಎಲ್ಲವನ್ನೂ NCR ಮಾದರಿಯಲ್ಲಿ ಗ್ರೇಟರ್ ಬೆಂಗಳೂರಾಗಿ ಪರಿವರ್ತಿಸುವ ಯೋಜನೆ ಇಲ್ಲದಿದ್ದರೆ, ಈ ಬದಲಾವಣೆಗೆ ಯಾವುದೇ ಅರ್ಥವಿಲ್ಲ.”

ಈ ಹೆಸರಿನ ಬದಲಾವಣೆ, ಕರ್ನಾಟಕದ ವಿವಿಧ ಭಾಗಗಳ ಅಭಿವೃದ್ಧಿಯಲ್ಲಿ ದೀರ್ಘಕಾಲದಿಂದ ಇರುವ ಪ್ರಾದೇಶಿಕ ಅಸಮತೋಲನದ ಕಳವಳವನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ವಿಮರ್ಶಕರು, ಇತರ ನಗರಗಳ ಅಭಿವೃದ್ಧಿಗೆ ಬೇಕಾದ ವೆಚ್ಚವನ್ನು ಬಿಟ್ಟು, ಸರ್ಕಾರ ಎಲ್ಲಾ ಒತ್ತು ಬೆಂಗಳೂರು ವಿಸ್ತರಣೆಗೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ತುಮಕೂರು ಅಥವಾ ಇತರ ಜಿಲ್ಲೆಗಳ ಕುರಿತು ಸರ್ಕಾರ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲದಿದ್ದರೂ, ಈ ದಿಕ್ಕಿನಲ್ಲಿ ಯಾವುದೇ ಮುಂದಿನ ಕ್ರಮಗಳು ಭವಿಷ್ಯದಲ್ಲಿ ಸಾರ್ವಜನಿಕ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.


Spread the love
Share:

administrator

Leave a Reply

Your email address will not be published. Required fields are marked *