Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಲ್ಲುಶಿಕ್ಷೆಗೂ ಮುನ್ನ ಮರಣದಂಡನೆಕಾರನ ಕೊನೆಯ ಪಿಸುಮಾತು: ಇದರ ಹಿಂದಿದೆ ಮಾನವೀಯ ಸಂದೇಶ!

Spread the love

Malawi abolishes death penalty: what it means for southern Africa

ಮರಣದಂಡನೆಗೆ ಮುನ್ನ, ಮರಣದಂಡನೆಕಾರನು ಕೈದಿಯ ಕಿವಿಯಲ್ಲಿ ಕೊನೆಯದಾಗಿ ಕೆಲವು ಪದಗಳನ್ನು ಪಿಸುಗುಟ್ಟುತ್ತಾನೆ. ಈ ಪ್ರತಿಕ್ರಿಯೆ ನಡೆದ ಕೆಲವೇ ಕ್ಷಣಗಳಲ್ಲಿ, ಕುತ್ತಿಗೆಗೆ ಹಗ್ಗವನ್ನು ಹಾಕಿ ಲಿವರ್ ಎಳೆಯುತ್ತಾನೆ.. ಬಹುತೇಕ ಈ ದೃಶ್ಯಗಳನ್ನು ನಾವು ಸಿನಿಮಾದಲ್ಲಿ ನೋಡಿದ್ದೇವೆ.

ಆದರೆ ಇದು ಕೇವಲ ಕಾಲ್ಪನಿಕವಲ್ಲ, ಈ ಪದ್ದತಿಯ ಹಿಂದೆ ಒಂದು ನಿರ್ದಿಷ್ಟ ಕಾರಣವೂ ಇದೆ.

ಸಿನಿಮಾಗಳಲ್ಲಿ ಹೆಚ್ಚಾಗಿ ನೀವು ಗಮನಸಿರಬಹುದು. ಮರಣದಂಡನೆ ವೇಳೆ ಆ ಸ್ಥಳದಲ್ಲಿ ಮರಣದಂಡನೆಕಾರ, ಸೂಪರಿಂಟೆಂಡೆಂಟ್, ವೈದ್ಯಕೀಯ ಅಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಹಾಜರಿರುತ್ತಾರೆ. ಅಧಿಕಾರಿಗಳು ಕೈದಿಯ ಕೈಯಿಂದ ಮರಣದಂಡನೆಗೆ ಸಹಿ ಹಾಕಿಸುತ್ತಾರೆ. ನಂತರ ಮುಖಕ್ಕೆ ಕಪ್ಪು ಬಟ್ಟೆಹಾಕಿ, ಕಿವಿಯಲ್ಲಿ ಕೆಲವು ಪದಗಳನ್ನು ಹೇಳಿದ ನಂತರ ಪಕ್ಕದಲ್ಲೇ ಇದ್ದ ಲಿವರ್‌ ಎಳೆದಾಗ, ಕೈದಿ ತೂರಾಡುತ್ತ ಪ್ರಾಣ ಬಿಡುತ್ತಾನೆ..

ಹಾಗಿದ್ರೆ, ಮರಣದಂಡನೆ ವಿಧಿಸುವಾಗ, ಮರಣದಂಡನೆಕಾರನು ಕೈದಿಯ ಕಿವಿಯಲ್ಲಿ ಸದ್ದಿಲ್ಲದೆ ಹೇಳುವ ಆ ಮಾತು.. “ಹಿಂದೂಗಳಿಗೆ ರಾಮ್ ರಾಮ್, ಮುಸ್ಲಿಮರಿಗೆ ಸಲಾಮ್.. ನಾನು ನನ್ನ ಕರ್ತವ್ಯಕ್ಕೆ ಬದ್ಧನಾಗಿದ್ದೇನೆ.. ನೀವು ಸತ್ಯದ ಹಾದಿಯಲ್ಲಿ ನಡೆಯಬೇಕೆಂಬುದು ನನ್ನ ಆಶಯ.”

ಈ ವಾಕ್ಯಗಳನ್ನು ಕೇಳಿದ ನಂತರ, ಕೈದಿಯು ಕನಿಷ್ಠ ಒಂದು ಕ್ಷಣ ಶಾಂತಿ, ಪಶ್ಚಾತ್ತಾಪ ಅಥವಾ ಸ್ವೀಕಾರವನ್ನು ಅನುಭವಿಸಬೇಕು ಎಂಬುದು ಇದರ ಉದ್ದೇಶವಾಗಿದೆ. ಮರಣದಂಡನೆಯ ಸಮಯದಲ್ಲಿ ಮರಣದಂಡನೆಕಾರನು ಯಾಂತ್ರಿಕ ಪಾತ್ರವನ್ನು ವಹಿಸುತ್ತಾನೆಯಾದರೂ, ಆ ಕ್ಷಣದಲ್ಲಿ, ಒಬ್ಬ ಮನುಷ್ಯನಾಗಿ, ಅವನು ತನ್ನ ಜವಾಬ್ದಾರಿಯನ್ನು ಪೂರೈಸುವಾಗ ಅಂತಿಮ ಸಂದೇಶವನ್ನು ನೀಡುತ್ತಾನೆ. ಇದು ಮಾನವೀಯತೆಯ ಗೌರವ ಮತ್ತು ಧಾರ್ಮಿಕ ಭಾವನೆಯ ನಡುವಿನ ಸಮತೋಲನವನ್ನು ತೋರಿಸುತ್ತದೆ.


Spread the love
Share:

administrator

Leave a Reply

Your email address will not be published. Required fields are marked *