ಕಲಬುರಗಿಯ ಡಾಬಾದಲ್ಲಿ ಮಧ್ಯಾರಾತ್ರಿ ಮೂವರ ಭೀಕರ ಹ*ತ್ಯೆ

ಕಲಬುರಗಿ:ಮೂರು ಡಾಬಾ ಕೆಲಸಗಾರರನ್ನು ದುಷ್ಕರ್ಮಿಗಳು ಡಾಬಾದೊಳಗೆ ನುಗ್ಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಹೊರವಲಯದ ಪಟ್ನಾ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಸಿದ್ದಾರೂಡ (32), ಜಗದೀಶ್ (25) ಹಾಗೂ ರಾಮಚಂದ್ರ (35) ಮೃತ ದುರ್ದೈವಿಗಳು.
ರಾತ್ರಿ 1.30 ರ ಸುಮಾರಿಗೆ ಈ ಘಟನೆ ನಡೆದಿದೆಯೆನ್ನಲಾಗಿದ್ದು, ಹಳೆಯ ವೈಷಮ್ಯದಡಿಯಲ್ಲಿ ದುಷ್ಕರ್ಮಿಗಳು ಈ ಕೃತ್ಯೆ ಎಸೆಗಿರಬಹುದೆಂದು ಶಂಕಿಸಲಾಗಿದೆ.
ಕಲಬುರಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.