Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು-ಚೆನ್ನೈ ಹೆದ್ದಾರಿ ಫ್ಲೈಓವರ್‌ ನಲ್ಲಿ ಬಿರುಕು

Spread the love

ಬೆಂಗಳೂರು:ಬೆಂಗಳೂರು ನಗರದಲ್ಲಿ ಕೆಲವೊಂದು ರಸ್ತೆಗಳು ಬಹಳಷ್ಟು ಪ್ರಮುಖ್ಯತೆ ಪಡೆದಿದೆ. ಇವುಗಳಲ್ಲಿ ಮೈಸೂರು ರಸ್ತೆ, ತುಮಕೂರು ರಸ್ತೆ, ದೇವನಹಳ್ಳಿ ರಸ್ತೆ ಮತ್ತು ಹೊಸೂರು ರಸ್ತೆ. ಈ ರಸ್ತೆಗಳು ಪ್ರಮುಖವಾಗಿ ಮೈಸೂರು, ತುಮಕೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸುವ ಬಹುಮುಖ್ಯ ರಸ್ತೆಯಾಗಿವೆ.

ಇವುಗಳಲ್ಲಿ ಏನಾದರೂ ಟ್ರಾಫಿಕ್ ಜಾಮ್ ಆದರೆ, ರಸ್ತೆಯಲ್ಲಿಯೇ ಸಂಪೂರ್ಣವಾಗಿ ನಿಂತು ಹೈರಾಣಾಗುವ ಪರಿಸ್ಥಿತಿ.

ಅದೇ ರೀತಿಯಲ್ಲಿ ಚೆನ್ನೈನಗರವನ್ನು ಕಲ್ಪಿಸುವ ಹೊಸೂರು ಫ್ಲೈಓವರ್ ನಲ್ಲಿ ಇದೀಗ ಸಮಸ್ಯೆ ಕಂಡು ಬಂದಿದೆ. ಈ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಪರ್ಯಾಯ ರಸ್ತೆ ಬಳಸಲು ಅಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಇದೀಗ ಆ ರಸ್ತೆಗಳಲ್ಲಿ ಓಡಾಡುವುದೇ ದುಸ್ಥರವಾಗಿದೆ.

ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ತುರ್ತು ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ, ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸೇತುವೆ 15 ವರ್ಷಗಳ ಹಿಂದೆ ಹೊಸೂರು ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿತ್ತು. ಪ್ರತಿದಿನ ಸುಮಾರು 50,000ಕ್ಕೂ ಹೆಚ್ಚು ವಾಹನಗಳು ಈ ಹೆದ್ದಾರಿಯಲ್ಲಿ ಓಡಾಡುತ್ತವೆ.

ಶನಿವಾರ, ಸೇತುವೆಯ ಮಧ್ಯಭಾಗದಲ್ಲಿ ಬಿರುಕು ( ಪಕ್ಕಕ್ಕೆ ಸರಿದಿರುವುದು) ಕಂಡುಬಂದಿದ್ದರಿಂದ ಮೇಲ್ಸೇತ್ಸುವೆಯಲ್ಲಿ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರಸನ್ನ ನೇತೃತ್ವದಲ್ಲಿ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ ಮತ್ತು ಸೇತುವೆ ಅಪಾಯಕಾರಿ ಎಂದು ತಿಳಿಸಲಾಗಿದೆ. ಇದರಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಪರ್ಯಾಯ ಮಾರ್ಗಗಳಿಗೆ ವಾಹನಗಳನ್ನು ತಿರುಗಿಸಲು ಸೂಚಿಸಲಾಗಿದೆ, ಇದರಿಂದಾಗಿ ದರ್ಗಾ ರಸ್ತೆಯ ಮೂಲಕ ಬಸ್ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರಿಕೊಳ್ಳುವ ಸ್ಥಳದಲ್ಲಿ ವಾಹನಗಳ ಜಾಮ್ ಉಂಟಾಗಿದೆ. ಕಂಟೈನರ್ ಟ್ರಕ್‌ಗಳ ಹೆಚ್ಚಳದಿಂದಾಗಿ ಈ ಸಮಸ್ಯೆ ಹೆಚ್ಚಾಗಿದೆ.

ಪ್ರಸನ್ನ ಅವರು, “ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಶೀಲನೆಯ ನಂತರ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. 2010 ರಲ್ಲಿ ಉದ್ಘಾಟನೆಯಾದ ಈ ಫ್ಲೈ ಓವರ್‌ವು ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕ ಕಲ್ಪಿಸುತ್ತದೆ.

ಈ ರಸ್ತೆಯು ದಟ್ಟಣೆಯನ್ನು ಕಡಿಮೆ ಮಾಡಲು ನಿರ್ಮಿಸಲಾಯಿತು. ಇಂಜಿನಿಯರಿಂಗ್ ತಜ್ಞರು ಭಾನುವಾರ ಹಾನಿಗೊಳಗಾದ ರಸ್ತೆಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ದುರಸ್ತಿ ಕಾರ್ಯಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರಿಂದ ಸಹಕಾರವನ್ನು ಕೋರಲಾಗಿದೆ, ಮತ್ತು ದುರಸ್ತಿ ಕಾರ್ಯಗಳು ಮುಗಿಯುವವರೆಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ. ಆದರೆ ಈ ದುರಸ್ಥಿ ಕಾರ್ಯ ಎಷ್ಟು ದಿನ ಎಂದು ಅಧಿಕಾರಿಗಳು ತಿಳಿಸಿಲ್ಲ, ಇದು ರೆಡಿಯಾದ ಬಳಿಕವೇ ಸಂಚಾರ ಆರಂಭವಾಗಲಿದೆ. ಅಲ್ಲಿಯವರೆಗೆ ಹೊಸೂರು ತೆರಳುವ ಪ್ರಯಾಣಿಕರಿಗೆ ತೊಂದರೆಯಂತೂ ಗ್ಯಾರಂಟಿ.


Spread the love
Share:

administrator

Leave a Reply

Your email address will not be published. Required fields are marked *