ಮಧ್ಯಪ್ರದೇಶದಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾಯದೇ ಹಾವು ಸಾವು

ಮಧ್ಯಪ್ರದೇಶ : ಹಾವು ಕಚ್ಚಿದರೆ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ ಮನುಷ್ಯ ಸಾಯುವುದು ಸಹಜ. ಆದರೆ ಮನುಷ್ಯನನ್ನು ಕಚ್ಚಿದ ಐದೇ ನಿಮಿಷದಲ್ಲಿ ಸ್ವತಃ ಹಾವೇ ಸತ್ತುಹೋಗಿರುವ ಘಟನೆ ಮಧ್ಯಪ್ರದೇಶ ಬಾಲಾಘಾಟ್ ನಲ್ಲಿ ಗುರುವಾರ ನಡೆದಿದೆ.
ಸಚಿನ್ ನಾಗ್ಪುರೆ (25) ಎಂಬ ಯುವಕ ತನ್ನ ಮನೆಯ ಬಳಿ ಓಡಾಡುವಾಗ ನೋಡದೇ ಹಾವಿನ ಮೇಲೆ ಕಾಲಿರಿಸಿದ್ದ.

ಆಗ ವಿಷಪೂರಿತವಾದ ಆ ಹಾವು ರೋಷದಿಂದ ರಭಸವಾಗಿ ಸಚಿನ್ ನಾಗ್ಪುರೆಯನ್ನು ಕಚ್ಚಿತ್ತು. ಆದರೆ ಸಚಿನ ನಾಗ್ಪುರೆಯ ಅದೃಷ್ಟ ಚೆನಾಗಿತ್ತು. ಹಾವಿನ ಅದೃಷ್ಟ ಕೆಟ್ಟಿತ್ತು. ಕಚ್ಚಿದ ರಭಸಕ್ಕೆ ಹಾವಿನ ವಿಷದ ಚೀಲವೇ ಹಾವಿನ ಹಲ್ಲಿನಿಂದ ತೀವ್ರವಾಗಿ ಗಾಯಗೊಂಡಿದ್ದು ಐದೇ ನಿಮಿಷದಲ್ಲಿ ಹಾವೇ ಸತ್ತುಹೋಗಿದೆ.
ಇಂಥಾ ಘಟನೆ ತೀರಾ ಅಪರೂಪ ಎಂದು ಸ್ಥಳೀಯ ಅರಣ್ಯಾಧಿಕಾರಿ ಧರ್ಮೇಂದ್ರ ಬೈಸನ್ ಹೇಳಿದ್ದಾರೆ. ಸಚಿನ್ ಈಗ ಆರೋಗ್ಯವಾಗಿದ್ದಾರೆ.