Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪರಿಸರದ ಬಗ್ಗೆ ಅರಿವು ಮೂಡಿಸಲು ಮುಂದಾದ ಧರ್ಮೋ ಉದಯಮ್ ಸಂಸ್ಥೆ

Spread the love

ಬೆಂಗಳೂರು: ಸಮಾಜಕ್ಕೆ ಪರಿಸರದ ಕಾಳಜಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಭೂಮಿಯೊಂದಿಗೆ ಸಮನ್ವಯದಿಂದ ಬದುಕುವಂತೆ ಪ್ರೇರೇಪಿಸಲು ಪ್ರಸ್ತುತ ಇದಾವುದರ ಬಗ್ಗೆ ಚಿಂತಿಸದೆ ನಿದ್ರಾವಸ್ಥೆಯಲ್ಲಿರುವ ಸಮಾಜವನ್ನು ಪ್ರೇರೇಪಿಸುವ ಸಲುವಾಗಿ “ಎದ್ದೇಳು ಚಳುವಳಿ” (Wake Up Movement) ಎಂಬ ಘೋಷ ವಾಕ್ಯದೊಂದಿಗೆ ದೇಶದಾದ್ಯಂತ ಚಳುವಳಿ ಪ್ರಾರಂಭಿಸಲು ಯುವ ಸಮುದಾಯದ ಬೆಂಬಲದೊಂದಿಗೆ ಪೂರ್ವಭಾವಿ ಸಭೆಯನ್ನು ನಗರದ ದಿ ಚಾನ್ಸ್ ಲರಿ ಹೋಟೆಲ್ ನಲ್ಲಿ ನಡೆಸಲಾಯಿತು ಸಭೆಯನ್ನು ಉದ್ದೇಶಿಸಿ ಧರ್ಮೋ ಉದಯಂ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀ ರಾಜೇಶ್ ಪವಿತ್ರನ್ ರವರು ಮಾತನಾಡಿ ಈ ಕಾರ್ಯಕ್ರಮದ ಅವಶ್ಯಕತೆ ಮತ್ತು ಅನಿವಾರ್ಯತೆಯ ಬಗ್ಗೆ ತಿಳಿಸಿದರು.

ಎದ್ದೇಳು ಚಳುವಳಿ (Wake Up Movement) ಎಂಬ ಈ ಚಳುವಳಿಯ ಮೊದಲ ಕಾರ್ಯಕ್ರಮವಾಗಿ ವೇಕಪ್ ಬೆಂಗಳೂರು (Wake Up Bangalore) ಎಂಬ ಕಾರ್ಯಕ್ರಮವನ್ನು ಜುಲೈ ತಿಂಗಳ 25 ಹಾಗೂ 26ರಂದು ನಗರದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸ್ಥಾಪಕರಾದ ಶ್ರೀಮತಿ ಪವಿತ್ರ ರಾಮ್ ಮೂರ್ತಿ, ಪರಿವರ್ತನ ಚಿಂತಕರಾದ ಡಾ. ಪ್ರದೀಪ್ ಕುಮಾರ್, ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರಾದ ಶ್ರೀ ಸ್ಯಾಂಡ್ಲಿನ್ ಜೋಸೆಫ್, ಸೇಂಟ್ ಜೋಸೆಫ್ ವಿದ್ಯಾರ್ಥಿ ನಾಯಕರಾದ ಶ್ರೀ ನಿತಿನ್ ಜೋಶ್ವ ಮತ್ತು ವಿದ್ಯಾರ್ಥಿ ನಾಯಕಿಯಾದ ಕುಮಾರಿ ರೋಹಿಣಿ ರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love
Share:

administrator

Leave a Reply

Your email address will not be published. Required fields are marked *