ಕೇಕ್ ತಿಂದು ಸಾವು ಪ್ರಕರಣದಲ್ಲಿ ಟ್ವಿಸ್ಟ್: ಮಗುವಿನ ಸಾವಿಗೆ ಕಾರಣವಾದ ಆಹಾರವೇ ಬೇರೆ

ಬೆಂಗಳೂರು:ನಗರದ ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದಲ್ಲಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅಚ್ಚರಿ ವಿಷಯ ಬಹಿರಂಗವಾಗಿದೆ. ಕೇಕ್ ತಿಂದು ಮಗು ಸತ್ತಿದ್ದಾಗಿ ಸುದ್ದಿಯಾಗಿತ್ತು. ಅಲ್ಲದೆ, ರಾಜ್ಯದಾದ್ಯಂತ ಈ ವಿಚಾರ ಪೋಷಕರ ಭಯಕ್ಕೆ ಕಾರಣವಾಗಿತ್ತು.

2024ರ ಅಕ್ಟೋಬರ್ 7 ಕೆ.ಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿ ಕೇಕ್ ತಿಂದು ಮಗು ಸತ್ತಿತ್ತು. ಫುಡ್ ಪಾಯ್ಸನ್ನಿಂದ 5 ವರ್ಷದ ಮಗು ಮೃತ ಪಟ್ಟಿತ್ತು. ಅಲ್ಲದೆ, ತಂದೆ-ತಾಯಿ ಸ್ಥಿತಿ ಗಂಭೀರವಾಗಿ, ಇಬ್ಬರಿಗೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದು ಫುಡ್ ಪಾಯ್ಸನ್ ಆಗಿದೆ ಅನ್ನೋ ವಿಚಾರ ಹರಿದಾಡಿತ್ತು. ಇದೀಗ ಎಫ್ಎಸ್ಎಲ್ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ನಡೆಸಿದ ತನಿಖೆಯಲ್ಲಿ ಇದೀಗ ಅಚ್ಚರಿ ವಿಚಾರ ಬಯಲಾಗಿದೆ. ಮಗು ಮನೆಯ ಫ್ರಿಜ್ಡ್ ನಲ್ಲಿಟ್ಟ ವಾಂಗಿಬಾತ್ ತಿಂದು ಸುತ್ತಿರುವುದು ದೃಢಪಟ್ಟಿದೆ.

ಫ್ರಿಡ್ಜ್ ನಲ್ಲಿಟ್ಟ ವಾಂಗಿ ಬಾತ್ ತಿಂದ ಮಗು ಮೃತಪಟ್ಟಿರೋದು ತನಿಖೆಯಿಂದ ತಿಳಿದು ಬಂದಿದೆ. ಇದೀಗ ಈ ಕುರಿತು ಕೋರ್ಟ್ಗೆ ವರದಿ ನೀಡಲು ಕೆ.ಪಿ ಅಗ್ರಹಾರ ಪೊಲೀಸರು ಸಿದ್ದರಾಗಿದ್ದಾರೆ. ಒಟ್ಟಾರೆಯಾಗಿ ಕೇಕ್ ತಿಂದು ಮಗು ಸತ್ತಿದೆ ಎನ್ನುವ ಸುದ್ದಿಯಿಂದ ರಾಜ್ಯದಾದ್ಯಂತ ಜನರು ಕೇಕ್ ತಿನ್ನಲು ಭಯಪಡುವಂತ ಮಾಡಿತ್ತು. ಇದೀಗ ಈ ಪ್ರಕರಣ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ.