ಭಕ್ತರಿಗೆ ಆಘಾತ: ಅಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಇನ್ಮುಂದೆ ಪುರುಷರಿಗೆ ಟಿಕೆಟ್, ಮಹಿಳೆಯರಿಗೆ ಮಾತ್ರ ಶಕ್ತಿ ಯೋಜನೆ

ಮೈಸೂರು: ಚಾಮುಂಡಿ ಬೆಟ್ಟವು ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಆಧ್ಯಾತ್ಮಿಕ ಕೇಂದ್ರವಾಗಿದೆ, ವಿಶೇಷವಾಗಿ ಅಷಾಢ ಮಾಸದಲ್ಲಿ (Ashada Masa 2025) ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಕಳೆದ ನಾಲ್ಕೈದು ವರ್ಷಗಳಿಂದ ಮೈಸೂರು (Mysuru) ಜಿಲ್ಲಾಡಳಿತವು ಅಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತೆರಳುವವರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿತ್ತು. ಆದರೆ ಈ ಬಾರಿ ಕೆ.ಎಸ್.ಆರ್.ಟಿ.ಸಿ (KSRTC) ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿದ್ದು, ಭಕ್ತರಿಗೆ ಬಿಗ್ ಶಾಕ್

ಈ ವರ್ಷ, ಶನಿವಾರ ಮತ್ತು ಭಾನುವಾರದಂದು ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದ್ದು, ಈ ಎರಡು ದಿನಗಳಲ್ಲಿ ಪುರುಷ ಭಕ್ತರು ಕಡ್ಡಾಯವಾಗಿ ಬಸ್ ಟಿಕೆಟ್ ಖರೀದಿಸಬೇಕಾಗಿದೆ. ಆದರೆ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಈ ಮಾರ್ಗಕ್ಕೂ ವಿಸ್ತರಿಸಲಾಗಿದೆ. ಈ ನಿರ್ಧಾರವು ಭಕ್ತರಲ್ಲಿ ಭಕ್ತರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವರು ಇದನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಉಚಿತ ಸೇವೆಯನ್ನು ರದ್ದುಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

49 ಬಸ್ಗಳ ಸಂಚಾರ ವ್ಯವಸ್ಥೆ
ಅಷಾಢ ಮಾಸದಲ್ಲಿ ಭಕ್ತರ ದಟ್ಟಣೆಯನ್ನು ನಿರ್ವಹಿಸಲು ಮೈಸೂರು ನಗರ ಕೆ.ಎಸ್.ಆರ್.ಟಿ.ಸಿ ಘಟಕವು 49 ಬಸ್ಗಳನ್ನು ಸಂಚಾರಕ್ಕೆ ಒಡ್ಡಲು ನಿರ್ಧರಿಸಿದೆ. ಕಳೆದ ವರ್ಷ 40 ಬಸ್ಗಳು ಕಾರ್ಯನಿರ್ವಹಿಸಿದ್ದವು, ಆದರೆ ಈ ಬಾರಿ ವೋಲ್ವೋ ಬಸ್ಗಳನ್ನು ಸೇರಿಸಿ ಹೆಚ್ಚಿನ ಸಂಖ್ಯೆಯ ಬಸ್ಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿದಿನ 280 ರಿಂದ 300 ಟ್ರಿಪ್ಗಳನ್ನು ನಿರ್ವಹಿಸುವ ಗುರಿಯನ್ನು ಇಡಲಾಗಿದ್ದು, ಭಕ್ತರಿಗೆ ಸರಾಗವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ವಾಹನ ನಿಷೇಧದಿಂದಾಗಿ ಕೆ.ಎಸ್.ಆರ್.ಟಿ.ಸಿ ಬಸ್ಗಳ ಮೇಲೆ ಒತ್ತಡ ಹೆಚ್ಚಾಗಿದೆ. ಟಿಕೆಟ್ ಕಡ್ಡಾಯಗೊಳಿಸಿರುವುದು ಕೆಲವರಿಗೆ ಆರ್ಥಿಕ ಭಾರವನ್ನುಂಟು ಮಾಡಬಹುದು. ಆದಾಗ್ಯೂ, ಹೆಚ್ಚಿನ ಬಸ್ಗಳನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಜನದಟ್ಟಣೆಯನ್ನು ನಿಯಂತ್ರಿಸುವ ಪ್ರಯತ್ನವನ್ನು ಕೆ.ಎಸ್.ಆರ್.ಟಿ.ಸಿ ಮಾಡಬೇಕಿದೆ.
