Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇದಾರನಾಥ ತಲುಪಲು ಯಾತ್ರಿಕರ ‘ಆಂಬ್ಯುಲೆನ್ಸ್ ಪ್ಲಾನ್’ ಫೇಲ್!

Spread the love

ಕೇದಾರನಾಥ :ಅವರೆಲ್ಲರು ಟ್ರಾಫಿಕ್ ಜಾಮ್ ತಪ್ಪಿಸಿ, ಕೇದಾರನಾಥ ಧಾಮಕ್ಕೆ ವೇಗವಾಗಿ ತಲುಪಲು ಬಯಸಿದ್ದರು. ಇದಕ್ಕಾಗಿ ಅವರು ಮಾಡಿದ ಖತರ್ನಾಕ್​ ಉಪಾಯ ಯಾವುದೆಂದರೆ, ಎರಡು ಆಂಬ್ಯುಲೆನ್ಸ್‌ ಬಾಡಿಗೆಗೆ ಪಡೆದಿದ್ದು. ಆಂಬ್ಯುಲೆನ್ಸ್​ನಲ್ಲಿ ತುರ್ತು ಮಾರ್ಗದಲ್ಲಿ ಹೋಗಲು ಬಯಸಿದ್ದರು.

ಆದರೆ, ಅವರ ಪ್ಲಾನ್ ಪೊಲೀಸರ ಮುಂದೆ ನಡೆಯಲಿಲ್ಲ. ಏಕೆಂದರೆ, ಮಾರ್ಗ ಮಧ್ಯೆ ಪೊಲೀಸರ ಕೈಗೆ ಅವರೆಲ್ಲ ಸಿಕ್ಕಿಬಿದ್ದರು. ಈ ವಿಚಿತ್ರ ಘಟನೆ ಸೋನ್‌ಪ್ರಯಾಗ್​ನಲ್ಲಿ ನಡೆದಿದ್ದು, ಅಲ್ಲಿನ ಪೊಲೀಸರು ಎರಡು ಆಂಬ್ಯುಲೆನ್ಸ್‌ಗಳನ್ನು ವಶಪಡಿಸಿಕೊಂಡು, ಇಬ್ಬರು ಚಾಲಕರಿಗೆ ಚಲನ್ ವಿಧಿಸಿದ್ದಾರೆ.

ಘಟನೆಯ ವಿವರಗಳಿಗೆ ಬರುವುದಾದರೆ, ಜೂನ್ 14ರಂದು ಕೆಲವು ಯಾತ್ರಿಕರು ಹರಿದ್ವಾರದಿಂದ ಉತ್ತರಾಖಂಡದ ಕೇದಾರನಾಥ ದೇವಸ್ಥಾನಕ್ಕೆ ಹೊರಟರು. ಎರಡು ಆಂಬ್ಯುಲೆನ್ಸ್‌ಗಳನ್ನು ಬುಕ್ ಮಾಡಿ ಅದರಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದರು. ಅವರೆಲ್ಲರ ಉದ್ದೇಶ ಸರಳವಾಗಿತ್ತು. ಅದೇನೆಂದರೆ, ಸಂಚಾರ ದಟ್ಟಣೆಯನ್ನು ತಪ್ಪಿಸಿ, ದೇವಾಲಯವನ್ನು ಬೇಗನೆ ತಲುಪಿ ದರ್ಶನ ಪಡೆಯುವುದು.

ಅನಾರೋಗ್ಯ ಪೀಡಿತ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಬಳಸುವ ತುರ್ತು ಸೇವಾ ವಾಹನವಾದ ಆಂಬ್ಯುಲೆನ್ಸ್ ಅನ್ನು ಪೊಲೀಸರು ನಿಲ್ಲಿಸುವುದಿಲ್ಲ ಎಂಬುದು ಯಾತ್ರಿಕರ ಬಲವಾದ ನಂಬಿಕೆಯಾಗಿತ್ತು. ಬುಕ್​ ಮಾಡಿದ ಆಂಬ್ಯುಲೆನ್ಸ್‌ಗಳನ್ನು ಏರಿ, ಸೈರನ್‌ಗಳನ್ನು ಆನ್ ಮಾಡಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಒಂದರ ನಂತರ ಒಂದರಂತೆ ಎಲ್ಲ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಿದರು. ಆದರೆ, ಅವರ ನಸೀಬು ಕೆಟ್ಟದಾಗಿದ್ದರಿಂದ ಸೋನ್‌ಪ್ರಯಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ?

ಗೌರಿಕುಂಡ್‌ನಿಂದ ಕೇದಾರನಾಥಕ್ಕೆ ಹೋಗುವ ದಾರಿಯಲ್ಲಿ ಭಕ್ತರು ಅನಾರೋಗ್ಯಕ್ಕೆ ಒಳಗಾದರೆ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಎಲ್ಲ ಚೆಕ್‌ಪೋಸ್ಟ್‌ಗಳಿಗೆ ಕೂಡಲೇ ಎಚ್ಚರಿಕೆಯನ್ನು ನೀಡಲಾಗುತ್ತದೆ. ಆದಾಗ್ಯೂ, ಸೋನ್‌ಪ್ರಯಾಗ ಪೊಲೀಸರಿಗೆ ಎರಡು ಆಂಬ್ಯುಲೆನ್ಸ್‌ಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೇ ವೇಳೆ ಸೈರನ್‌ಗಳು ಮೊಳಗಿಸುತ್ತಾ ವೇಗವಾಗಿ ಬರುತ್ತಿರುವ ಎರಡು ವಾಹನಗಳನ್ನು ನೋಡಿದಾಗ, ಸೋನ್​ಪ್ರಯಾಗ್​ ಪೊಲೀಸರು ತಕ್ಷಣ ಅವುಗಳನ್ನು ತಡೆದರು. ಬಳಿಕ, ವಾಹನಗಳನ್ನು ಪರಿಶೀಲಿಸಿದಾಗ ಪೊಲೀಸರು ಅಚ್ಚರಿಗೊಂಡರು. ಏಕೆಂದರೆ, ಆಂಬ್ಯುಲೆನ್ಸ್​ ಒಳಗೆ ಯಾತ್ರಿಗಳು, ಎಸಿ ಆನ್​ ಮಾಡಿಕೊಂಡು ಆರಾಮಾಗಿ ಕೇದಾರನಾಥಕ್ಕೆ ಹೋಗುತ್ತಿರುವುದು ಗೊತ್ತಾಯಿತು.

ಎರಡರಲ್ಲಿ ಒಂದು ಆಂಬ್ಯುಲೆನ್ಸ್ ರಾಜಸ್ಥಾನದ RJ14 PF 2013 ನೋಂದಣಿ ಸಂಖ್ಯೆ ಹೊಂದಿದ್ದರೆ, ಎರಡನೆಯದು ಉತ್ತರಾಖಂಡದ UK08 PA 1684 ನೋಂದಣಿ ಸಂಖ್ಯೆ ಹೊಂದಿತ್ತು. ಎರಡೂ ವಾಹನಗಳನ್ನು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ವಶಪಡಿಸಿಕೊಂಡು ಚಾಲಕರಿಗೆ ದಂಡ ವಿಧಿಸಲಾಗಿದೆ. ಸಾಮಾನ್ಯವಾಗಿ, ಹರಿದ್ವಾರದಿಂದ ಋಷಿಕೇಶ, ಬ್ಯಾಸಿ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ, ತಿಲ್ವಾರಾ, ಆಗಸ್ಟ್ಮುನಿ, ಗುಪ್ತಕಾಶಿ ಫಾಟಾ ಮುಂತಾದ ಸ್ಥಳಗಳಲ್ಲಿ ಕಟ್ಟುನಿಟ್ಟಾದ ಪೊಲೀಸ್ ತಪಾಸಣೆ ಇರುತ್ತದೆ. ಆದರೆ, ತುರ್ತು ಪರಿಸ್ಥಿತಿಯಿಂದಾಗಿ, ಈ ಸ್ಥಳಗಳ ಪೊಲೀಸರು ಎರಡು ವಾಹನಗಳನ್ನೂ ನಿಲ್ಲಿಸಲಿಲ್ಲ. ಆದರೆ, ಸೋನ್​ಪ್ರಯಾಗ್​ ಪೊಲೀಸರ ಕೈಗೆ ಸಿಕ್ಕಿಬಿದ್ದರು.

ಹಿಮಾಲಯದ ಕೇದಾರನಾಥ ದೇವಾಲಯದ ದ್ವಾರಗಳು ಮೇ 2 ರಂದು ತೆರೆಯಲಾಗಿದ್ದು, ನವೆಂಬರ್‌ನಲ್ಲಿ ನಡೆಯುವ ಸಮಾರೋಪ ಸಮಾರಂಭದ ಬಳಿಕ ಮುಚ್ಚಲಾಗುತ್ತದೆ.


Spread the love
Share:

administrator

Leave a Reply

Your email address will not be published. Required fields are marked *