ಅಜ್ಜಿ ತಿಥಿಗೆ ಹೋಗಿದ್ದಾಗ ಮನೆ ದೋಚಿ 240 ಗ್ರಾಂ ಚಿನ್ನ ಕಳ್ಳತನ: ಮಗಳ ಮದುವೆ ಮುಂದೂಡಿದ ಕುಟುಂಬ!

ಬೆಂಗಳೂರು ಗ್ರಾಮಾಂತರ (ಆನೇಕಲ್) : ಅಜ್ಜಿಯ ತಿಥಿಗೆಂದು ಮನೆ ಬಿಟ್ಟು ಹೋದವರಿಗೆ ಮನೆಗೆ ಬರುವಷ್ಟರಲ್ಲಿ ಶಾಕ್ ಕಾದಿತ್ತು. ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಇದರಿಂದ ಆಗಬೇಕಿದ್ದ ಮದುವೆಯ ಕಾರ್ಯವೇ ಮುಂದೂಡುವಂತಾಗಿದೆ.
ತಮ್ಮ ಹಳೆ ಮನೆಯಲ್ಲಿ ಮನೆ ಮಂದಿಯಲ್ಲ ಸೇರಿ ಅಜ್ಜಿಯ ತಿಥಿ ಕಾರ್ಯ ಮಾಡುತ್ತಿದ್ದಾರೆ.
ಇತ್ತ ಕಳ್ಳರು ಹೊಸ ಮನೆಯಲ್ಲಿದ್ದ 240 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಆಡೆಸೊಣ್ಣಟ್ಟಿ ಗ್ರಾಮದಲ್ಲಿ ನಡೆದಿದೆ.
ಮೇ 2ನೇ ತಾರೀಖು ರಾತ್ರಿ ಪ್ರೇಮಾ ಎಂಬುವವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 240 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಗಳ ಮದುವೆಗಾಗಿ ಖರೀದಿಸಿದ್ದ ಒಡವೆ ಕಳೆದುಕೊಂಡ ಪ್ರೇಮಾ ಕಣ್ಣೀರು ಹಾಕಿದ್ದು, ಒಡವೆ ಇಲ್ಲದೆ ನಿಶ್ಚಯವಾಗಿದ್ದ ಮದುವೆ ಮುಂದೂಡಿದ್ದಾರೆ.
ಪ್ರೇಮಾ ಅವರು, ಮಗಳ ಮದುವೆಗಾಗಿ 240 ಗ್ರಾಂ ಚಿನ್ನ ಖರೀದಿಸಿದ್ದರು. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ
ಸೂರ್ಯನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸುಧಾಕರ್ (37) ಆಜಯ್ (36), ಅರವಿಂದ್ ಬಂಧಿತರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಗಾಗ, 9 ಮನೆಗಳಲ್ಲಿ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾರೆ.
ಆರೋಪಿಗಳು 9 ಪ್ರಕರಣಗಳಲ್ಲಿ ಒಂದು ಕೆಜಿಗೂ ಅಧಿಕ ಚಿನ್ನ ಕದ್ದಿದ್ದಾರೆ. ಆದರೆ, ಇಲ್ಲಿಯವರೆಗೆ 290 ಗ್ರಾಂ ಚಿನ್ನ ಮಾತ್ರ ರಿಕವರಿಯಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ. ಕಳ್ಳತನವಾದ ಚಿನ್ನವನ್ನು ಶೀಘ್ರ ರಿಕವರಿ ಮಾಡಿಕೊಡುವಂತೆ ಪ್ರೇಮಾ, ಪೊಲೀಸರಿಗೆ ಮನವಿ ಮಾಡಿದ್ದಾರೆ.