ಮೈಸೂರು: ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟ ಪಿಯುಸಿ ವಿದ್ಯಾರ್ಥಿ ನಾಪತ್ತೆ, ಪೋಷಕರ ಕಣ್ಣೀರು

ಮೈಸೂರು:- ಕ್ಷುಲ್ಲಕ ಕಾರಣಕ್ಕಾಗಿ ಮನೆಬಿಟ್ಟು ಹೋದ ಮಗನ ಬರುವಿಕೆಗೆ ಪೋಷಕರು ಕಣ್ಣೀರು ಹಾಕುತ್ತಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ಜರುಗಿದೆ.
ಪುನೀತ್ ಮನೆ ಬಿಟ್ಟು ಹೋಗಿರುವ ಯುವಕ. ನರಸೀಪುರ ಪಟ್ಟಣದ ದಾಸನಾಯಕರ ಕಾಲೋನಿಯ ನಿವಾಸಿ ರವಿ ಮತ್ತು ಶಿಲ್ಪಾ ಎಂಬುವರ ಪುತ್ರ ಪುನೀತ್ ಬನ್ನೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ.
ಈತ ಕ್ಷುಲ್ಲಕ ಕಾರಣಕ್ಕೆ ಕಳೆದ 6 ತಿಂಗಳ ಹಿಂದೆ ಮನೆ ಬಿಟ್ಟು ಹೋದವ ಇನ್ನೂ ಪತ್ತೆಯಾಗಿಲ್ಲ.
ಮಗ ಬಾರದ ಹಿನ್ನೆಲೆ, ಚಿಂತೆಯಲ್ಲಿರುವ ಪೋಷಕರು, ಎಲ್ಲಿದ್ದರು ಮನೆಗೆ ಬಾ ಎಂದು ಕಣ್ಣೀರು ಹಾಕುತ್ತಿದ್ದಾರೆ. ನರಸೀಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ಯುವಕನನ್ನು ಕಂಡರೆ ಮಾಹಿತಿ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ.
ಯುವಕ ಸಿಕ್ಕರೆ ತಕ್ಷಣ ಈ ನಂಬರ್ ಗೆ ಕರೆ ಮಾಡಿ:
Ph No: 7760031291, 9611081291,
ನರಸೀಪುರ ಪೊಲೀಸ್ ಠಾಣೆ ನಂಬರ್: 08227 261227