‘ಈ ಮನೆ ಮಾರಾಟಕ್ಕಿದೆ’: ನೀರಿಲ್ಲದ ಹಳ್ಳಿಯಲ್ಲಿ ಮನೆ ಬಿಟ್ಟ ಜನರು

ರಾಜಸ್ಥಾನ: ಉಪ್ಪಿನ ಪ್ಯಾನ್ ಗಳು ಮತ್ತು ಪ್ರತಿ ವರ್ಷ ಭೇಟಿ ನೀಡುವ ವಲಸೆ ಹಕ್ಕಿಗಳಿಗೆ ಹೆಸರುವಾಸಿಯಾಗಿರುವ ಸಾಂಬಾರ್ ಪಟ್ಟಣ ಇದೀಗ ದೊಡ್ಡ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಪಟ್ಟಣ ತೊರೆದು ಸ್ಥಳಾಂತರಗೊಳ್ಳಲು ಮುಂದಾಗಿದ್ದಾರೆ.ಹೀಗಾಗಿ ರಾಜಸ್ಥಾನದ ಈ ಪಟ್ಟಣದ ಬೀದಿಗಳಲ್ಲಿ ಹಾಗೇ ಸುಮ್ಮನೆ ಒಂದು ಸುತ್ತು ಹಾಕಿ ಬಂದ್ರೆ ಮನೆ ಮಾರಾಟಕ್ಕಿದೆ ಎಂಬ ಬೋರ್ಡ್ ಗಳು ರಾರಾಜಿಸುತ್ತಿವೆ.ಇದಕ್ಕೆ ಕಾರಣ ಇಲ್ಲಿನ ನೀರಿನ ಬಿಕ್ಕಟ್ಟು.
ಹೌದು ತೀವ್ರ ನೀರಿನ ಬಿಕ್ಕಟ್ಟಿನಿಂದಾಗಿ ಈ ಬೀದಿಯಲ್ಲಿರುವ ಎಲ್ಲಾ ಮನೆಗಳು ಮಾರಾಟಕ್ಕೆ ಬಂದಿವೆ.
ಈ ಪಟ್ಟಣದ ಮನೆಗಳ ಮೇಲೆ ಅಂಟಿಸಲಾದ ಈ ಪೋಸ್ಟರ್ ಬರಹ ಹೀಗಿದೆ: ಈ ಮನೆ ಮಾರಾಟಕ್ಕಿದೆ. ತೀವ್ರ ನೀರಿನ ಬಿಕ್ಕಟ್ಟು ಉಂಟಾಗಿದ್ದು, ನಾವು ನಮ್ಮ ಮನೆಯನ್ನು ಮಾರಿ ಬೇರೆಡೆಗೆ ಹೋಗಬೇಕಾಗಿದೆ ಎಂದು ಬರೆಯಲಾಗಿದೆ.ಈ ಸಾಂಬಾರ್ ಪಟ್ಟಣ ರಾಜಧಾನಿ ಜೈಪುರದಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿದೆ.
ಕಳೆದ 7 ವರ್ಷಗಳಿಂದ ಇದೇ ಸಮಸ್ಯೆಯಾಗಿದ್ದು, ನಮ್ಮ ಮನೆಗಳಿಗೆ ಪೈಪ್ಲೈನ್ಗಳ ಮೂಲಕ ನೀರು ಸರಬರಾಜು ಮಾಡಲು ಯಾವುದೇ ನೀರಿನ ಟ್ಯಾಂಕ್ ಇಲ್ಲ. ಈ ವಾರ್ಡ್ನ ಸುಮಾರು 200 ಜನರು ಒಟ್ಟುಗೂಡಿ ಇಲ್ಲಿಂದ ವಲಸೆ ಹೋಗುವುದು ಉತ್ತಮ ಎಂದು ಸ್ಥಳೀಯರು ಹೇಳಿದ್ದಾರೆ.ಇಲ್ಲಿ ಸುಮಾರು 3,500 ಜನರಿದ್ದರು, ಆದರೆ ಈಗ ಆ ಸಂಖ್ಯೆ 1700 ಕ್ಕೆ ತಲುಪಿದೆ ಎಂದು ಇಲ್ಲಿನ ಕೌನ್ಸಿಲರ್ ಹೇಳಿದ್ದಾರೆ.ಇನ್ನು ಸದ್ಯ ಉಳಿದಿರುವ ಜನರು ಕೂಡ ಶೀಘ್ರದಲ್ಲೇ ಇಲ್ಲಿಂದ ಹೊರಹೋಗಲು ಯೋಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರದೇಶದ ಕಾಂಗ್ರೆಸ್ ಶಾಸಕ ವಿದ್ಯಾಧರ್ ಚೌಧರಿ ಮಾತನಾಡಿ ನಮಗೆ ಬರಬೇಕಾದ ನೀರಿನಲ್ಲಿ ಅರ್ಧದಷ್ಟು ಮಾತ್ರ ಪೂರೈಕೆಯಾಗುತ್ತಿದೆ.ಆದರೆ ಹಳೆಯ ಪೈಪ್ಲೈನ್ಗಳಿಂದಾಗಿ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.ಆದ್ರೆ ಜನಪ್ರತಿನಿಧಿಗಳ ಮೇಲೆ ಸಂಪೂರ್ಣ ವಿಶ್ವಾಸ ಕಲೆಸುಕೊಂಡಿರುವ ಇಲ್ಲಿನ ಜನರು ಮನೆ ಖಾಲಿ ಮಾಡಿಕೊಂಡು ಹೊರಡಲು ಮುಂದಾಗಿದ್ದಾರೆ.