ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಕೊಲಂಬಿಯಾದ ನಿಲುವು ಬದಲಾವಣೆ

ಪಾಕಿಸ್ತಾನದ ಪರ ಸಹಾನುಭೂತಿ ತೋರಿದ ಕೊಲಂಬಿಯಾ ಸರ್ಕಾರ ಇದೀಗ ತನ್ನ ಹೇಳಿಕೆಯನ್ನು ವಾಪಸ್ಸು ತೆಗೆದುಕೊಂಡಿದೆ. ಈ ಹೇಳಿಕೆಯನ್ನು ಹಿಂದೆ ಸರಿಯಲು ಪ್ರಮುಖ ಕಾರಣ ಭಾರತದಿಂದ ಹೋಗಿರುವ ನಿಯೋಗ ಕಾರಣವಾಗಿದೆ. ನಿಯೋಗದ ನೇತೃತ್ವ ವಹಿಸಿದ ಶಶಿ ತರೂರ್ ಕೊಲಂಬಿಯಾದ ಹೇಳಿಕೆಗೆ ನಿರಾಶೆ ವ್ಯಕ್ತಪಡಿಸಿದರು. ಇದೀಗ ಕೊಲಂಬಿಯಾ ಕೂಡ ತನ್ನ ಹೇಳಿಕೆಯನ್ನು ವಾಪಸ್ಸು ತೆಗೆದುಕೊಂಡಿದೆ. ಮೇ. 30ರಂದು ಶಶಿ ತರೂರ್ ಅವರು ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಕೊಲಂಬಿಯಾ ತನ್ನ ಹಿಂದಿನ ನಿಲುವನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತೀಯ ವೈಮಾನಿಕ ದಾಳಿಯ ನಂತರ ಪಾಕಿಸ್ತಾನಿಗಳಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಈ ನಿಲುವು ಟೀಕೆಗೆ ಗುರಿಯಾಗಿತ್ತು. ಇದೀಗ ತನ್ನ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ್ದ ಭಾಗವಾಗಿ ಪಾಕಿಸ್ತಾನವನ್ನು ಜಗತ್ತಿನ ಮುಂದೆ ಬೆತ್ತಲೆ ಮಾಡಲು ಹಾಗೂ ಭಯೋತ್ಪಾದನೆಯನ್ನು ನಾಶ ಮಾಡಲು ಭಾರತದ ಜತೆಗೆ ಜಗತ್ತಿನ ರಾಷ್ಟ್ರಗಳು ನಿಲ್ಲಬೇಕು ಎಂದು ಭಾರತ ಸರ್ಕಾರ ಸರ್ವಪಕ್ಷ ಸಂಸದರ ನಿಯೋಗವನ್ನು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೆ ಕಳಿಸಲಾಗಿದೆ. ಇದೀಗ ಇದರ ಭಾಗವಾಗಿ ಭಾರತಕ್ಕೆ ಬೆಂಬಲ ನೀಡಲು ಕೊಲಾಂಬಿಯಾವನ್ನು ಕೂಡ ಕೇಳಲಾಗಿದೆ. ಸದ್ಯದಲ್ಲೇ ಅದು ಕೂಡ ಭಾರತದ ಹೋರಾಟಕ್ಕೆ ಬೆಂಬಲ ನೀಡಲಿದೆ. ಈ ಬಗ್ಗೆ ಹೇಳಿಕೆ ನೀಡಿದ ಶಶಿ ತರೂರ್ ನಾವು ಕೊಲಾಂಬಿಯಾದ ವಿದೇಶಾಂಗ ಸಚಿವಾಲಯವನ್ನು ಭೇಟಿದ್ದೇವು, ಅಲ್ಲಿ ನಮಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದರ ಜತೆಗೆ ನಮಗೆ ಒಳ್ಳೆಯ ಸುದ್ದಿಯನ್ನು ಕೂಡ ಕಾದಿತ್ತು. ಅದು ಪಾಕಿಸ್ತಾನದಲ್ಲಿ ಸತ್ತವರಿಗೆ ಸಂತಾಪ ಸೂಚಿಸಿ ನೀಡಿದ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡದ್ದು, ಪಾಕ್ ಪರ ಈ ಹೇಳಿಕೆ ನೀಡಿದಕ್ಕೆ ನಿರಾಶೆಯನ್ನು ನಾವು ವ್ಯಕ್ತಪಡಿಸಿದ್ದೇವು. ಇದೀಗ ಕೊಲಾಂಬಿಯಾ ತನ್ನ ಈ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಅಲ್ಲಿನ ಮುಖ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿಯವರ ಸುಂದರವಾದ ಪ್ರತಿಮೆಯ ಮುಂದೆ ನಿಂತು ಅವರಿಗೆ ಗೌರವ ಸಲ್ಲಿಸಲಾಯಿತು. ಅಲ್ಲಿಂದ ಬೊಗೋಟಾದ ಟಾಡಿಯೊ ಲೊಜಾನೊ ವಿಶ್ವವಿದ್ಯಾಲಯಕ್ಕೆ ನಮ್ಮ ನಿಯೋಗ ಭೇಟಿ ನೀಡಿದೆ. ಅಲ್ಲಿನ ವೇದಿಕೆಯಲ್ಲಿ ನಿಂತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಸರಣಿ ಮಿಲಿಟರಿ ದಾಳಿಯಾದ ಆಪರೇಷನ್ ಸಿಂಧೂರ್ಕ್ಕೆ ಕೊಲಂಬಿಯಾದ ಪ್ರತಿಕ್ರಿಯೆಯ ಬಗ್ಗೆ ತರೂರ್ ನಿರಾಶೆ ವ್ಯಕ್ತಪಡಿಸಿದ್ದರು . ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಬದಲಾಗಿ ಪಾಕಿಸ್ತಾನದ ಸಾವುನೋವುಗಳಿಗೆ ಕೊಲಂಬಿಯಾ ಸಹಾನುಭೂತಿ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.
ಭಾರತೀಯ ದಾಳಿಯ ನಂತರ ಪಾಕಿಸ್ತಾನದಲ್ಲಿ ಸಂಭವಿಸಿದ ಜೀವಹಾನಿಗೆ ಕೊಲಂಬಿಯಾ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿತು.ಆದರೆ ಭಯೋತ್ಪಾದನೆಯಿಂದ ಬಲಿಯಾದ ಜನರ ಬಗ್ಗೆ ಸಹಾನುಭೂತಿ ತೋರಿಸಿಲ್ಲ. ಇದರಿಂದ ನಾವು ಸ್ವಲ್ಪ ನಿರಾಶೆಗೊಂಡಿದ್ದೇವೆ ಹೇಳಿದ್ದಾರೆ. ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತೆಯ ನಿಲುವನ್ನು ತಿಳಿಸುವ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಬಹುಪಕ್ಷ ನಿಯೋಗದ ನೇತೃತ್ವ ವಹಿಸಿದ್ದಾರೆ. ಮೊದಲು ಅಮೆರಿಕಕ್ಕೆ ಹೋಗಿತ್ತು. ಅಲ್ಲಿಂದ ಪನಾಮ ಮತ್ತು ಗಯಾನಾಗೆ ಭೇಟಿ ನೀಡಿದ ನಂತರ , ತಂಡವು ಗುರುವಾರ ಕೊಲಂಬಿಯಾಕ್ಕೆ ಭೇಟಿ ನೀಡಿದೆ. ಇಲ್ಲಿಂದ ಬ್ರೆಜಿಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಭೇಟಿ ನೀಡಲಿದ್ದಾರೆ.