ಮೈಸೂರಲ್ಲಿ ಪೊಲೀಸರ ತಲೆ ಕೆಡಿಸಿದ ಬರ್ಬರ ಕೊಲೆ

ಮೈಸೂರು:ವ್ಯಕ್ತಿಯ ಬರ್ಬರ ಹತ್ಯೆ ಮೈಸೂರು ತಾಲೂಕಿನ ಕೆ.ಹೆಮ್ಮನಹಳ್ಳಿಯ ಚಿಕ್ಕೆರೆಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಕೊಲೆ ಪ್ರಕರಣದ ಕೇಸ್ ಪೊಲೀಸರಿಗೆ ತಲೆನೋವಾಗಿದೆ.
ಜಯಪುರ ಠಾಣಾ ಪೊಲೀಸರಿಂದ ಮೃತ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಚಿಕ್ಕೆರೆ ಕೆರೆಯಲ್ಲಿ ಈಜು ತಜ್ಞರಿಂದ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ವುಕ್ತಿಯ ಕೈ, ಕಾಲು, ತಲೆ, ರುಂಡ ಕತ್ತರಿಸಿ ಕೆರೆಗೆ ದುಷ್ಕರ್ಮಿಗಳು ಎಸೆದಿದ್ದಾರೆ. ಕೆರೆಯಲ್ಲಿ ಮನುಷ್ಯನ ದೇಹದ ಭಾಗಗಳು ತೆಲುತ್ತಿದ್ದವು. 30 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿದ್ದವು. ಗಂಡಸಿನ ತಲೆ, ಎಡ ಮುಂಗೈ, ಬಲ ಮೊಣಕಾಲು, ಹಾಗೂ ಒಂದು ತೊಡೆಯ ಭಾಗ ಪತ್ತೆಯಾಗಿದ್ದವು.
ಉಳಿದ ದೇಹದ ಭಾಗಗಳನ್ನ ಹುಡುಕಲು ಪೊಲೀಸರು ಮುಂದಾಗಿದ್ದಾರೆ. ಹೊರಗಡೆ ಕೊಲೆ ಮಾಡಿ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ದುಷ್ಕರ್ಮಿಗಳು ಎಸೆದಿದ್ದಾರೆ. ಈ ವರೆಗೂ ಮೃತ ವ್ಯಕ್ತಿಯ ಗುರುತು ಸಿಗಲಿಲ್ಲ. ಪ್ರಕರಣ ಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.