ವೀರ ಸಾವರ್ಕರ್ ಗೆ ಭಾರತ ರತ್ನ ಆಗ್ರಹಿಸಿ ದೇಶಾದ್ಯಂತ”ವೀರಸಾವರ್ಕರ್ ಸಮ್ಮಾನ್ ಯಾತ್ರೆ”-ಹಿಂದೂ ಮಹಾಸಭಾ ಬೆಂಬಲ

ಮಂಗಳೂರು:ಸ್ವತಂತ್ರ ವೀರ ವಿನಾಯಕವೀರಸಾವರ್ಕರ್ ಸಮ್ಮಾನ್ ಯಾತ್ರೆ* ದಾಮೋದರ ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಒತ್ತಾಯಿಸಿ ದೇಶದಾದ್ಯಂತ ವೀರಸಾವರ್ಕರ್ ಸಮ್ಮಾನ್ ಯಾತ್ರೆ ಯೂ ನಡೆಯಲಿದೆ ಈ ಯಾತ್ರೆಯೂ ಅವರ ಜನ್ಮ ಸ್ಥಳ ವಾದ ಮಹಾರಾಷ್ಟ್ರ ದ ನಾಸಿಕ್ ನಿಂದ ಅವರ ಜಯಂತಿ ದಿನವಾದ 28/5/2025 ರಂದು
ವೀರ ಸಾವರ್ಕರ್ ರವರ ಮೊಮ್ಮಗರಾದ ಶ್ರೀ ರಂಜಿತ್ ಸಾವರ್ಕರ್ ರವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡು
ರಥ ಯಾತ್ರೆ ಹೊರಡಲಿದೆ. ದಿನಾಂಕ 31/05/2025 ರ ಶನಿವಾರದಂದು ಕರ್ನಾಟಕ ರಾಜ್ಯದ ಗಡಿ ಪ್ರದೇಶ ಕಾರವಾರ ಕ್ಕೆ ಬಂದು ತಲುಪಲಿದೆ ಅಲ್ಲಿಂದ ಉಡುಪಿ -ಮಂಗಳೂರು -ಹಾಸನ -ಬೆಂಗಳೂರು ತಲುಪಲಿದೆ .
ಕರ್ನಾಟಕದ ಪ್ರಮುಖ ಕೇಂದ್ರಗಳಲ್ಲಿ ಸ್ವಾಗತ ನೀಡುವ ಕಾರ್ಯಕ್ರಮ ಹಿಂದೂ ಮಹಾ ಸಭಾ -ಕರ್ನಾಟಕ ಘಟಕ ಕ್ಕೆ ವಹಿಸಿರುತ್ತಾರೆ ಆದುದರಿಂದ ಆಯಾಜಿಲ್ಲೆಗೆ ಯಾತ್ರೆ ಬರುವಾಗ ಸ್ವಾಗತಿಸುದು ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಕರ್ತವ್ಯ ಆಗಿರುತ್ತದೆ.
ಈ ಯಾತ್ರೆಯ ಮೂಲಕ ಎಲ್ಲಾ ಪದಾಧಿಕಾರಿಗಳು ಕಾರ್ಯ ಪ್ರವೃತಾರಾಗಲು
ಹಿಂದೂ ಮಹಾ ಸಭಾದ ಸಂಸ್ಥಾಪಕರಾದ ರಾಜೇಶ್ ಪವಿತ್ರನ್ ಹಾಗು ರಾಜ್ಯಾಧ್ಯಕ್ಷರಾದ ಡಾ. ಎಲ್. ಕೆ ಸುವರ್ಣರವರು
ಜಂಟಿಯಾಗಿ ಕರೆ ನೀಡಿದರು.