ಲಷ್ಕರ್ ನಾಯಕ ಆಮಿರ್ ಹಮ್ಜಾ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಲಾಹೋರ್: ಸೈಫುಲ್ಲಾ ನಂತರ, ಪಾಕಿಸ್ತಾನದಲ್ಲಿ ಮತ್ತೊಬ್ಬ ಭಯೋತ್ಪಾದಕ ಆಮಿರ್ ಹಮ್ಜಾಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಲಾಹೋರ್ನಲ್ಲಿ ಅಪರಿಚಿತ ದಾಳಿಕೋರರು ಹಮ್ಜಾ ಮೇಲೆ ದಾಳಿ ನಡೆಸಿದ್ದಾರೆ.
ಆಮಿರ್ ಹಮ್ಜಾ ಲಷ್ಕರ್-ಎ-ತೊಯ್ಬಾ ಸಹ ಸಂಸ್ಥಾಪಕರಲ್ಲಿ ಒಬ್ಬ. ಆತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
ಸಿಂಧ್ನಲ್ಲಿ ಸೈಫುಲ್ಲಾ ಹತ್ಯೆ
ಇದಕ್ಕೂ ಮುನ್ನ ಭಾನುವಾರ ಪಾಕಿಸ್ತಾನದ ಸಿಂಧ್ನಲ್ಲಿರುವ ಅಬು ಸೈಫುಲ್ಲಾ ಖಾಲಿದ್ ಅವರ ಮನೆಯಲ್ಲಿ ಅಪರಿಚಿತ ಬಂಧೂಕುಧಾರಿಗಳು ದಾಳಿ ನಡೆಸಿದ್ದರು. ಇದರಲ್ಲಿ ಆತ ಸಾವನ್ನಪ್ಪಿದ್ದ. ರಝಾವುಲ್ಲಾ ನಿಜಾಮಾನಿ ಖಾಲಿದ್ ಎಂದೂ ಆತನನ್ನು ಕರೆಯಲಾಗುತ್ತಿತ್ತು. ಲಷ್ಕರ್ ಸಂಘಟನೆಯ ಪ್ರಮುಖ ಭಯೋತ್ಪಾದಕ ಆತ.
ಆತ 2000ರಿಂದಲೂ ನೇಪಾಳದಲ್ಲಿದ್ದುಕೊಂಡು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ, ಭಾರತ-ನೇಪಾಲ ಗಡಿಯಲ್ಲಿ ಭಯೋತ್ಪಾದಕರ ನೇಮಕಾತಿ, ಹಣ,ಲಾಜಿಸ್ಟಿಕ್ಸ್ ನಿರ್ವಹಿಸುತ್ತಿದ್ದ.
ಭಾರತದಲ್ಲಿ ನಡೆದ ಹಲವು ದಾಳಿಗಳ ಹಿಂದಿನ ಮಾಸ್ಟರ್ಮೈಂಡ್ ಆಗಿದ್ದ ಸೈಫುಲ್ಲಾ
2006ರಲ್ಲಿ ನಾಗ್ಪುರದ ಆರ್ಎಸ್ಎಸ್ ಕೇಂದ್ರ ಕಚೇರಿಯ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರ ಖಾಲಿದ್ ಆಗಿದ್ದ, ಇದರಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದರು. 2005 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲೆ ನಡೆದ ದಾಳಿಯಲ್ಲೂ ಈತನ ಸಂಬಂಧವಿತ್ತು, ಈ ದಾಳಿಯಲ್ಲಿ ಪ್ರಾಧ್ಯಾಪಕ ಮುನೀಶ್ ಚಂದ್ರ ಪುರಿ ಸಾವನ್ನಪ್ಪಿದರು ಮತ್ತು ಇತರ ನಾಲ್ವರು ಗಾಯಗೊಂಡರು. ಆ ದಾಳಿಕೋರರು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಖಾಲಿದ್ನ ಆಪ್ತ ಸಹಚರ ಅಬು ಅನಸ್ ವಿರುದ್ಧ ಆರೋಪಪಟ್ಟಿ ದಾಖಲಾಗಿದ್ದರೂ, ಅವನು ಇನ್ನೂ ತಲೆಮರೆಸಿಕೊಂಡಿದ್ದಾನೆ. 26/11 ಮುಂಬೈ ದಾಳಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹಮ್ಜಾ.
ಆತನ ಹಣೆ, ಮೂಗಿನಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು, ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಹಫೀಜ್ ಮತ್ತು ಇತರರು ಹಮ್ಜಾ ಅವರನ್ನು ಕೇಳದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಹಮ್ಜಾ ಲಷ್ಕರೆ ಸಂಘಟನೆಯ ಜಮಾತ್ ಉಟ್ ದವಾದ ಮುಖ್ಯಸ್ಥರೂ ಆಗಿದ್ದ.
2012 ರಲ್ಲಿ ಅಮೆರಿಕ ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿತು.
2018 ರಲ್ಲಿ, ಲಷ್ಕರ್ಗಾಗಿ ಸಂಗ್ರಹಿಸಿದ ನಿಧಿಯ ಬಗ್ಗೆ ಅಮೀರ್ ಹಮ್ಜಾ ಮತ್ತು ಹಫೀಜ್ ಸಯೀದ್ ನಡುವೆ ಬಿರುಕು ಉಂಟಾಗಿತ್ತು. ಏಕೆಂದರೆ ಪಾಕಿಸ್ತಾನ ಸರ್ಕಾರವು ಅಂತಾರಾಷ್ಟ್ರೀಯ ಒತ್ತಡದ ಮೇರೆಗೆ ಈ ಸಂಘಟನೆಗೆ ಹಣ ಪಡೆಯುವುದನ್ನು ನಿಷೇಧಿಸಿತ್ತು.
ಅದಾದ ನಂತರ ಹಮ್ಜಾ ಜೈಶ್ ಇ ಮಂಕಫಾ ಎಂಬ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸಿ ನಿಧಿ ಸಂಗ್ರಹಿಸಲು ಕೆಲಸ ಮಾಡಿದ್ದ.ಹಫೀಜ್ನಿಂದ ದೂರವಿರುವುದರಿಂದ, ಹಮ್ಜಾ ಕಳೆದ ಕೆಲವು ವರ್ಷಗಳಿಂದ ಸಕ್ರಿಯ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ಅವನು ಭಯೋತ್ಪಾದಕರ ಬ್ರೈನ್ವಾಶ್ ಮಾಡುವುದನ್ನು ಮುಂದುವರೆಸಿದ್ದ.