ರಿಯಾಲಿಟಿ ಶೋ ಬಳಿಕ ಕಠಿಣ ಪಾಠ: ನಟಿ ಮನೀಷಾ ಸಾಮಾಜಿಕ ಜಾಲತಾಣದಲ್ಲಿ ಅಳಲು

ಬಿಗ್ ಬಾಸ್ ರಿಯಾಲಿಟಿ ಶೋ ನಂತರ 15 ತಿಂಗಳ ಕಾಲ ಸ್ಥಿರ ಆದಾಯವಿಲ್ಲದೆ, ಸಾಲದ ಭಾರದಿಂದ ಈ ನಟಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಮಾನಸಿಕ ಒತ್ತಡ ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ನಿಜವಾದ ಬೆಂಬಲಿಗರನ್ನು ಗುರುತಿಸುವ ಅವಕಾಶ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಟಿವಿ ಶೋ ಆಗಿರುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ನಂತರ ಸತತವಾಗಿ 15 ತಿಂಗಳಾದರೂ ಯಾವುದೇ ಸ್ಥಿರ ಆದಾಯವಿಲ್ಲ. ಆಗ ನನಗೆ ಸಾಲಕೊಟ್ಟವರು ನನ್ನ ಬಗ್ಗೆ ತೀರಾ ಕೆಟ್ಟದಾಗಿ ನೋಡಿದ್ದಾರೆ. ಆಗ ನನ್ನ ಆರೋಗ್ಯವೂ ಕೈಕೊಟ್ಟು ಆಸ್ಪತ್ರೆ ಸೇರಿದ್ದೆ ಎಂದು ಕಷ್ಟದ ದಿನಗಳನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿ ಮನೀಷ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿರುವ ಮನೀಷಾ ಕೆ.ಎಸ್. ಅವರು, ನಟನೆ, ಗಾಯನ, ಡಬ್ಬಿಂಗ್ ಮೂಲಕ ಬ್ಯೂಸಿ ಆಗಿದ್ದವರು. ಆದರೆ, ಈ ಎಲ್ಲವನ್ನೂ ಬಿಟ್ಟು ಶ್ರೀಮಂತ ರಿಯಾಲಿಟಿ ಶೋ ಮಲಯಾಳಂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರಿಗೆ ಖ್ಯಾತಿಯನ್ನು ಗಳಿಸುವುದಕ್ಕೆ ಬಂದರು.
ಮಲಯಾಳಂ ಸೇರಿ ದಕ್ಷಿಣ ಭಾರತದ ವಾಹಿನಿಗಳ ಎಲ್ಲ ವೀಕ್ಷಕರು ನಟಿ ಮನೀಷ ಕೆ.ಎಸ್. ಅವರನ್ನು ಬಿಗ್ ಬಾಸ್ ಮನೆಯಿಂದ ಗುರುತಿಸಿದರು. ಆದರೆ, ಬಿಗ್ ಬಾಸ್ ಹೋಗಿಬಂದ ನಂತರ ನಟಿ ಮನಿಷಾ ಅವಕಾಶಗಳನ್ನು ಬಿಟ್ಟು ಹೋಗಿದ್ದರಿಂದ ಸ್ಥಿರ ಆದಾಯವಿಲ್ಲದೆ ತನಗಾದ ಆರ್ಥಿಕ ಸಂಕಕಷ್ಟ ಅನುಭವಗಳನ್ನು ವೀಕ್ಷಕರ ಮುಂದೆ ಸಾಮಾಜಿಕ ಜಾಲತಾಣದ ಮೂಲಕ ಬಿಚ್ಚಿಟ್ಟಿದ್ದಾರೆ.
ನಟಿ, ಗಾಯಕಿ ಮತ್ತು ಡಬ್ಬಿಂಗ್ ಕಲಾವಿದೆಯೂ ಆಗಿರುವ ಮನೀಷ ಅವರು, ಒಬ್ಬ ನಟಿಗೆ ನಿಯಮಿತ ಆದಾಯ ಇಲ್ಲದಿದ್ದೆ ಜೀವನದಲ್ಲಿ ಏನೆಲ್ಲಾ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದು, ಇದೀಗ ದೇಶದ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ.
ಮನೀಷ ಅವರ ಪೋಸ್ಟ್ನ ಪೂರ್ಣರೂಪ:
‘ಜೀವನವು ವಿಸ್ಮಯಗಳಿಂದ ತುಂಬಿದ ಚಿತ್ರಕಥೆಯಂತೆ. ಕೆಲವು ತಿಂಗಳುಗಳಿಂದ ಹಲವು ಕಾರಣಗಳಿಂದಾಗಿ ದುಃಖದ ವಾತಾವರಣದ ಮೂಲಕ ಜೀವನ ಸಾಗುತ್ತಿದೆ. ಮಾನಸಿಕ ಒತ್ತಡ ಹೆಚ್ಚಾದಾಗ ದೇಹವು ಅದರ ಸ್ವಾಭಾವಿಕ ಪ್ರತಿಕ್ರಿಯೆಗಳನ್ನು ತೋರಿಸಲು ಪ್ರಾರಂಭಿಸಿತು. ಆಸ್ಪತ್ರೆಗೆ ದಾಖಲಾಗುವುದು ಸಹ ಪದೇ ಪದೇ ಆಯಿತು
ಸಾಲ ತೆಗೆದುಕೊಂಡವರ ಬೈಗುಳಗಳು ಮನಸ್ಸಿಗೆ ತುಂಬಾ ನೋವುಂಟುಮಾಡಿದೆ. ಸುಧೀರ್ಘ 15 ತಿಂಗಳುಗಳಿಗೂ ಹೆಚ್ಚು ಕಾಲ ಸ್ಥಿರ ಆದಾಯವಿಲ್ಲ. ಆದಾಯವಿಲ್ಲದಿರುವುದು ಖರ್ಚಿನ ಮೇಲೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರಲಿಲ್ಲ.
ಕೆಲಸ ಮಾಡಿದ ಹಣ ಸಿಗದಿರುವುದರ ಬೇಸರ ಪ್ಯಾನಿಕ್ ಅಟ್ಯಾಕ್ ಮತ್ತು ಇತರ ಹಲವು ದೈಹಿಕ ಸಮಸ್ಯೆಗಳಿಗೆ ಕಾರಣವಾಯಿತು. ಈ ಸಮಯದಲ್ಲಿ ನಿಜವಾಗಿಯೂ ಯಾರು ನನ್ನ ಜೊತೆಗಿದ್ದಾರೆಂದು ತಿಳಿದುಕೊಳ್ಳಲು ಒಂದು ಸುವರ್ಣಾವಕಾಶ ಸಿಕ್ಕಿತು. ಅನೇಕರು ಕರೆ ಮಾಡಿದರೂ ಫೋನ್ ಸಹ ಎತ್ತಲಿಲ್ಲ. ಜೀವನದ ಆ ಅಧ್ಯಾಯದ ಬಗ್ಗೆ ಕೆಲವರನ್ನು ಉಲ್ಲೇಖಿಸಿ ಮತ್ತೊಂದು ಪೋಸ್ಟ್ ಶೀಘ್ರದಲ್ಲೇ ಬರೆಯುತ್ತೇನೆ.
ಈ ಪೋಸ್ಟ್ ಅನ್ನು ಸ್ವಯಂ ಪ್ರೇರಣೆಗಾಗಿ ಬರೆಯುತ್ತಿದ್ದೇನೆ. ಆಲೋಚಿಸಿದರೆ ಏನೂ ಇಲ್ಲ, ಆಲೋಚಿಸದಿದ್ದರೆ ಏನೂ ಇಲ್ಲ ಎಂದು ಕುಂಞಣ್ಣಿ ಮಾಸ್ಟರ್ ಹೇಳಿದಂತೆ ಜೀವನವು ತನ್ನದೇ ಆದ ಲಯದಲ್ಲಿ ಮುಂದುವರಿಯುತ್ತದೆ. ಏರಿಳಿತಗಳು ಎಲ್ಲಾ ಮನುಷ್ಯರಿಗೂ ಅನ್ವಯಿಸುತ್ತದೆ.\
ಕಷ್ಟದ ಸಮಯದಲ್ಲಿ ಜೊತೆಯಲ್ಲಿದ್ದ ಕೆಲವರಿಗೆ ಹೃದಯಪೂರ್ವಕ ಧನ್ಯವಾದಗಳು. ಯಾವುದೇ ಕಷ್ಟದ ಸಮಯದಲ್ಲೂ ನಗುತ್ತಿರಲು ಶಕ್ತಿ ನೀಡಿದ ದೇವರಿಗೆ ನೂರು ನೂರು ಧನ್ಯವಾದಗಳು’ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.