ನೆರೆಮನೆಯ ಜಗಳ ಕೊಲೆಯಲ್ಲಿ ಅಂತ್ಯ: 8 ವರ್ಷದ ಬಾಲಕನ ದಾರುಣ ಹತ್ಯೆ

ಬೆಂಗಳೂರು : ನೆರೆಮನೆಯವರ ಜಗಳ ಬಾಲಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಹೊರವಲಯದ ರಾಯಸಂದ್ರದಲ್ಲಿ ನಡೆದಿದೆ
ರಾಯಸಂದ್ರದ ನಿವಾಸಿಯಾದ 8 ವರ್ಷದ ಬಾಲಕ ರಮಾನಂದ ಕೊಲೆಯಾದ ದುರ್ದೈವಿ.
ನೆರೆಮನೆಯವರೊಂದಿಗೆ ಬಾಲಕನ ಕುಟುಂಬ ಸದಾ ಜಗಳವಾಗುತ್ತಿತ್ತು.
ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ನೆರೆಮನೆಯ ನಿವಾಸಿ ಮತ್ತೂರು ಎಂಬಾತ ಬಾಲಕನನ್ನು ಅಪಹರಿಸಿ ಕೊಲೆಗೈದಿದ್ದಾನೆ.
ನೆನ್ನೆ ತಡರಾತ್ರಿ ಬೆಂಗಳೂರಿನ ರಾಯಸಂದ್ರ ಕೆರೆ ಬಳಿ ಬಾಲಕನ ಮೃತ ದೇಹ ಪತ್ತೆಯಾಗಿದ್ದು ಈ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ನೆರೆಮನೆಯ ಮತ್ತೂರು ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ಸತ್ಯ ಬಾಯಿಬಿಟ್ಟಿದ್ದಾನೆ
ಬಾಲಕನನ್ನು ಅಪಹರಿಸಿದ ಮತ್ತೂರು, ಆತನನ್ನು ಕೊಂದು ಚೀಲದಲ್ಲಿ ತುಂಬಿ ಕೆರೆಯ ಬಳಿ ಬಿಸಾಡಿದ್ದ ಎಂದು ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ