ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ:ಹಿಂದೂ ಮಹಾ ಸಭೆಯಿಂದ ತೀವ್ರ ಖಂಡನೆ

ಮಂಗಳೂರು :ನಿನ್ನೆ ರಾತ್ರಿ ಮಂಗಳೂರು ಬಜ್ಪೆ ಪೇಟೆ ಸಮೀಪ ಮತಾಂಧರು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಸಂಚರಿಸುತಿದ್ದ ಇನೋವಾ ಕಾರ್ ಗೇ ಮೀನು ಸಾಗಾಟ ಟೆಂಪೋ ವನ್ನು ಡಿಕ್ಕಿ ಹೊಡೆದು ಸುಹಾಸ್ ಶೆಟ್ಟಿ ಯನ್ನು ಹೊರಗಡೆ ಎಳೆದು ಹಾಕಿ ತಲವಾರ್ ನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನೋಡಿದರೆ ಮತಾಂಧ ಕೊಲೆಗಡುಕರಿಗೆ ಪೊಲೀಸ್ ಭಯವೇ ಇಲ್ಲದಂತೆ ಕಾಣುತ್ತದೆ ಈ ಕೊಲೆ ಯನ್ನು ಹಿಂದೂ ಮಹಾ ಸಭಾ ತೀವ್ರ ವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ದಲ್ಲಿದೆ ಎಂದು ಮತಾಂಧರು ಗುಂಡಾವರ್ತನೆ ನಡೆಸಿದರೆ ಹಿಂದೂ ಸಮಾಜ ಕೈ ಕಟ್ಟಿ ಕೂರಲ್ಲ ತಿರುಗೇಟು ನೀಡಲು ಪ್ರಾರಂಭವಾದರೆ ಪೊಲೀಸ್ ಇಲಾಖೆಗೂ ನಿಯಂತ್ರಿಸಲು ಅಸಾಧ್ಯ ಎಂದು ಹಿಂದೂ ಮಹಾ ಸಭಾ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ ಎಲ್ ಕೆ ಸುವರ್ಣ ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರ ವಿ ಆರ್ ಬ್ರದರ್ಸ್ ಮಾನ್ಯತೆ ನೀಡದೆ ಕೂಡಲೇ ಆರೋಪಿ ಗಳನ್ನು ಬಂದಿಸಲು ಪೊಲೀಸ್ ಇಲಾಖೆಗೆ ಯಾವುದೇ ಅಡ್ಡಿ ಪಡಿಸದೆ ಖಡಕ್ ಆದೇಶ ನೀಡಬೇಕು ಪೊಲೀಸ್ ಕೂಡ ಎಲ್ಲಾ ಆರೋಪಿ ಗಳನ್ನು ಬಂಧಿಸಿ ಮರಣ ದಂಡನೆ ಆಗುವ ರೀತಿಯಲ್ಲಿ ಕೇಸ್ ದಾಖಲಿಸಬೇಕು. ಮತೀಯ ವಾದಿಗಳನ್ನು ಮಟ್ಟಹಾಕಲು ಇದು ಅನಿವಾರ್ಯ ಎಂದು ಹಿಂದೂ ಮಹಾ ಸಭಾ ಪೊಲೀಸ್ ಇಲಾಖೆಯನ್ನು ಪತ್ರಿಕಾ ಮಾಧ್ಯಮ ಮೂಲಕ ಆಗ್ರಹಿಸುತ್ತಿದೆ.