ಅತ್ತೆಯ ಮೈಮೇಲೆ ಖಾರದ ಪುಡಿ ಎಸೆದು ಚಿನ್ನ ದರೋಡೆ ಮಾಡಿದ ಅಳಿಯ

ವಿಜಯಪುರ: ಸೋದರಳಿಯನೇ ಸ್ವಂತ ಅತ್ತೆಯ ಮೈಮೇಲಿದ್ದ ಚಿನ್ನಾಭರಣ ದರೋಡೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇಂಡಿತಾಲೂಕಿನ ಅಂಜುಟಗಿ ಗ್ರಾಮದ ನಿಂಬೆವ್ವಾ ಪೂಜಾರಿ (70) ಎಂಬುವರು ಸೋದರಳಿಯ ನಿಂಗಪ್ಪ ಪೂಜಾರಿಯನ್ನು ಕರೆದುಕೊಂಡು ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದಲ್ಲಿನ ಸಂಬಂಧಿಕರ ಮನೆಗೆ ಹೋಗಿದ್ದರು.
ಸಾಯಂಕಾಲ ಗುಳೆದಗುಡ್ಡದಿಂದ ನಿಡಗುಂದಿಗೆ ಆಗಮಿಸಿ, ಅಲ್ಲಿಂದ ಝಳಕಿಗೆ ಬಸ್ ಮೂಲಕ ಬಂದಿದ್ದರು. ಝಳಕಿಯಿಂದ ಬೈಕ್ನಲ್ಲಿ ಅಳಿಯನ ಜೊತೆಗೆ ಅಂಜುಟಗಿ ಗ್ರಾಮಕ್ಕೆ ನಿಂಬೆವ್ವಾ ತೆರಳುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮಾರ್ಗ ಮದ್ಯೆ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಪೆಟ್ರೋಲ್ ತರುತ್ತೇನೆಂದು ನಿಂಪ್ಪ ಹೋಗಿದ್ದನು.
ಕೆಲ ಸಮಯದ ನಂತರ ನಿಂಗಪ್ಪ ಬಟ್ಟೆಗಳನ್ನು ಬದಲಾಯಿಸಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮತ್ತೋರ್ವನೊಂದಿಗೆ ನಿಂಬೆವ್ವರ ಬಳಿಗೆ ಬಂದು, ಕಣ್ಣಿಗೆ ಖಾರದ ಪುಡಿ ಎರಚಿ, ಬಾಯಿಗೆ ಬಟ್ಟೆ ತುರಕಿ ಅವರ ಮೈ ಮೇಲಿದ್ದ 130 ಗ್ರಾಂಗೂ ಆಧಿಕ ಚಿನ್ನಾಭರಣ ಕಿತ್ತುಕೊಂಡು ಓಡಿ ಹೋಗಿದ್ದರು.