Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಳ್ಳಕೆರೆ: 60 ವರ್ಷಗಳ ಹಿಂದಿನ ನಿಗೂಡ ತಿಜೂರಿ ಪತ್ತೆ – ದೇವರ ಬಂಗಾರದ ಹಿಂದೆ ರಹಸ್ಯಮಯ ಕಥೆ

Spread the love

ಚಳ್ಳಕೆರೆ (ಚಿತ್ರದುರ್ಗ): ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬಂಗಾರ ದೇವರಹಟ್ಟಿ ಗ್ರಾಮದಲ್ಲಿ 60 ವರ್ಷಗಳ ಹಿಂದೆ ಕಳ್ಳತನವಾಗಿದೆ ಅಂದುಕೊಂಡಿದ್ದ ದೇವರ ಚಿನ್ನಾಭರಣವಿದ್ದ ಬ್ರಿಟಿಷ್‌ ಕಾಲದ ತಿಜೂರಿ ಪೆಟ್ಟಿಗೆ ಭಾನುವಾರ ಪತ್ತೆಯಾಗಿದೆ. ಒಂದೂವರೆ ಕೆಜಿಯಷ್ಟು ಬಂಗಾರದ ಪೂಜಾ ಸಾಮಗ್ರಿ ಇರುವ ತಿಜೂರಿ ಇದಾಗಿದ್ದು, ಜೆಸಿಬಿಯಿಂದ ಸ್ಥಳ ಸಮತಟ್ಟು ಮಾಡುವಾಗ ಸಿಕ್ಕಿದೆ. ಬುಡಕಟ್ಟು ದೇವರ ಆಭರಣದ ನಿಗೂಡ ಕಾಂತಾರ ಕತೆಯೊಂದು ಸುತ್ತಲೂ ಕುತೂಹಲಕ್ಕೆ ಕಾರಣವಾಗಿದೆ.ಹಟ್ಟಿಯ ಯಜಮಾನರು ‘‘ಇದು ತುಕ್ಕು ಹಿಡಿದಿದೆ, ಗುಜುರಿಗೆ ಹಾಕಿದರಾಯಿತು’’ ಎಂದು ಹಾರೆಯಿಂದ ಮೀಟಿದಾಗ ಚಿನ್ನಾಭರಣ ಪತ್ತೆಯಾಗಿವೆ. ದಶಕಗಳಿಂದ ಸ್ವಚ್ಛಗೊಳಿಸದೆ ಹಾಗೆಯೇ ಇದ್ದ ಆಭರಣಗಳು ಈಗ ಹೊಳಪು ಕಳೆದುಕೊಂಡಿವೆ. ಆಕಸ್ಮಿಕವಾಗಿ ಕಾಣೆಯಾಗಿದ್ದ ಬಂಗಾರದ ಒಡವೆ ಹಿಂದೆ ನಡೆದಿರುವ ಕೊಲೆ ರಕ್ತಪಾತದ ಕತೆಯೂ ಇದರೊಂದಿಗೆ ಬೆಳಕಿಗೆ ಬಂದಿದೆ. ಇದು ದೇವರ ಬಂಗಾರ ಕದ್ದ ಎಂಬ ಆರೋಪ ಪೂಜಾರಿಯ ಮೇಲೆ ಹಾಕುವಂಥ ಕಥೆಯಿರುವ ಕೆಲವು ಸಿನಿಮಾ ಕಥೆಯನ್ನು ಹೋಲುತ್ತದೆ.

ನನ್ನಿವಾಳ ಗ್ರಾಮದಲ್ಲಿ ದೊಡ್ಡದಾದ ಬೆಟ್ಟವಿದೆ. ನೋಡಲು ಏಕಶಿಲಾ ಬೆಟ್ಟದಂತೆ ಕಾಣುವ ಇದು ಚಳ್ಳಕೆರೆ – ಚಿತ್ರದುರ್ಗ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸಾಗುವಾಗ ದೂರದಿಂದಲೇ ಕಾಣುತ್ತದೆ. ಹಲವಾರು ದಶಕಗಳ ಹಿಂದಿನಿಂದಲೂ ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಕೆಲವು ಹಿರಿಯರು, ಕಿರಿಯರು ನನ್ನಿವಾಳದ ಬೆಟ್ಟದ ಕೆಳಗೆ ಕೈ ತೋರಿಸಿ ಆ ಬೆಟ್ಟದ ಕೆಳಗೆ ಬಂಗಾರವಿದೆ ಎಂದು ಹೇಳುತ್ತಿದ್ದರು. ಬಹುಶಃ ಈಗ ಸಿಕ್ಕಿರುವ ಬಂಗಾರದ ಬಗ್ಗೆಯೇ ಆಗಿನ ಜನರು ಮಾತನಾಡಿಕೊಳ್ಳುತ್ತಿದ್ದರೇನೋ ಎಂದೆನಿಸುತ್ತದೆ.


Spread the love
Share:

administrator

Leave a Reply

Your email address will not be published. Required fields are marked *