Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

₹2 ಕೋಟಿ ದರೋಡೆ ಪ್ರಕರಣ; ಸ್ನೇಹಿತನೇ ಸೂತ್ರಧಾರ, ಉದ್ಯಮಿ ವಿರುದ್ಧವೂ ವಂಚನೆ ಕೇಸ್!

Spread the love

ಬೆಂಗಳೂರು: ನಗರದ ಉದ್ಯಮಿಯೊಬ್ಬರ 2 ಕೋಟಿ ರೂ. ನಗದು ಕಸಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದ್ದು, ಉದ್ಯಮಿ ಶ್ರೀಹರ್ಷನ ಸ್ನೇಹಿತ ರಕ್ಷಿತ್‌ ಈ ಕೃತ್ಯದ ಸೂತ್ರಧಾರ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಶ್ರೀಹರ್ಷ, ಕೋಲ್ಡ್‌ ಪ್ರೆಸ್ಡ್‌ ಆಯಿಲ್‌ ಉದ್ಯಮ ಸ್ಥಾಪಿಸಲು 2 ಕೋಟಿ ರೂ. ಸಂಗ್ರಹಿಸಿದ್ದನು, ಇದನ್ನು ಜರ್ಮನಿಯಿಂದ ಯಂತ್ರೋಪಕರಣ ಖರೀದಿಸಲು ಬಳಸಬೇಕಾಗಿತ್ತು. ಹಣವನ್ನು ಪರಿವರ್ತಿಸಲು ತನ್ನ ಸ್ನೇಹಿತ ರಕ್ಷಿತ್‌ ಮತ್ತು ಬೆಂಜಮಿನ್‌ ಅವರನ್ನು ಸಂಪರ್ಕಿಸಿದ್ದನು. ಜೂ. 25ರಂದು, ಬೆಂಜಮಿನ್‌ ಶ್ರೀಹರ್ಷನನ್ನು ಎ.ಕೆ. ಎಂಟರ್‌ಪ್ರೈಸಸ್‌ ಮಳಿಗೆಗೆ ಕರೆಸಿ, ಪೂರ್ವನಿಗದಿತ ಸಂಚಿನಂತೆ 2 ಕೋಟಿ ರೂ. ದರೋಡೆ ಮಾಡಿದರು.ಬಈ ಕೃತ್ಯದಲ್ಲಿ ರಕ್ಷಿತ್‌ ಸಹ ಭಾಗಿಯಾಗಿದ್ದಾನೆ.

ಉದ್ಯಮಿ ವಿರುದ್ಧವೂ ಕೇಸ್‌..!

ಇನ್ನು, ಹಣ ಕಳೆದುಕೊಂಡ ಶ್ರೀಹರ್ಷ ವಿರುದ್ಧ ಮಹಿಳಾ ಉದ್ಯಮಿಯೊಬ್ಬರ ಬಳಿ 2 ಕೋಟಿ ರೂ. ವಂಚನೆ ಪ್ರಕರಣವೂ ದಾಖಲಾಗಿದೆ. ಈ ಪ್ರಕರಣದಲ್ಲಿ, ಶ್ರೀಹರ್ಷ ಮಹಿಳೆಗೆ ನಗದು ಬದಲಾಯಿಸುವುದಾಗಿ ಹೇಳಿ ವಂಚಿಸಿದ್ದನು. ಹೀಗಾಗಿ, ಹವಾಲಾ ನಂಟು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಶ್ರೀಹರ್ಷಗೆ 2 ಕೋಟಿ ರೂ. ನಗದಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಸೂಚಿಸಲಾಗಿದೆ, ಆದರೆ ಇದುವರೆಗೆ ಅವನು ನೀಡಿಲ್ಲ.

ಇನ್ನು, ನಗರದಲ್ಲಿ 7.76 ಲಕ್ಷ ರೂ. ಮೌಲ್ಯದ ಕಳ್ಳತನದ ಪ್ರಕರಣವೂ ವರದಿಯಾಗಿದೆ. ಗುಬ್ಬಿ ಕಾಲೊನಿಯ ನಿವಾಸಿ ಶಿವಲಿಂಗಪ್ಪ ಭೀಮರಾವ ಅವರ ಮನೆಗೆ ಕಳ್ಳರು ನುಗ್ಗಿ, 40 ಗ್ರಾಂ. ಬಂಗಾರದ ಆಭರಣಗಳು ಮತ್ತು 15 ಸಾವಿರ ನಗದು ಸೇರಿ 7.76 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ಅವರು ತಮ್ಮ ಮಗನ ಜನ್ಮದಿನದ ನಿಮಿತ್ತ ಕೋಲ್ಲಾಪುರಕ್ಕೆ ತೆರಳಿದ್ದರು, ಮತ್ತು ಮನೆಗೆ ಹಿಂತಿರುಗಿದಾಗ ಕಳ್ಳತನ ನಡೆದಿರುವುದನ್ನು ತಿಳಿದುಕೊಂಡರು.


Spread the love
Share:

administrator

Leave a Reply

Your email address will not be published. Required fields are marked *